ಗಾಳಿ ಮಳೆಗೆ ನಲುಗಿದ ರೈತರು..!

ಹರಪನಹಳ್ಳಿ:

     ತಾಲೂಕಿನಲ್ಲಿ ಗಾಳಿ, ಮಳೆಗೆ ರೇಷ್ಮೆಗೂಡಿನ ಷೆಡ್ ಹಾಗೂ 4 ಮನೆಗಳು ಜಖಂಗೊಂಡ ಘಟನೆ ಸೋಮುವಾರ ಸಂಜೆ ನಡೆದಿದೆ.ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ದೇವರ ತಿಮ್ಮಾಲಾಪುರದಲ್ಲಿ ಗೋವಿಂದಪ್ಪರ ಲಕ್ಷ್ಮಪ್ಪ ಹಾಗೂ ಅಡವಿಹಳ್ಳಿ ಗ್ರಾಮದಲ್ಲಿ ನಿಚ್ಚಾಪುರ ರುದ್ರಪ್ಪ, ಉಪ್ಪಾರ ಬಸವರಾಜ, ಕುರುಬರ ನಾಗರಾಜ, ಪಿ.ಶಿವರುದ್ರಪ್ಪ ಇವರಿಗೆ ಸೇರಿದ ರೇಷ್ಮೆ ಹುಳು ಸಾಕಾಣಿಕೆ ಮನೆಗಳು ಬಿರುಗಾಳಿ, ಮಳೆಗೆ ನೆಲಸಮವಾಗಿವೆ.

     ಕುಮಾರನಹಳ್ಳಿ ಗ್ರಾಮದಲ್ಲಿ ಪೂಜಾರ ರತ್ನಮ್ಮ, ಬಸವರಾಜ, ಪರಶುರಾಮ, ನಾಗರಾಜ ಸೇರಿ 4 ಮನೆಗಳ ಮೇಲ್ಚಾವಣಿಯ ಸೀಟುಗಳು ಹಾರಿಹೋಗಿ ಜಖಂಗೊಂಡಿವೆ.ಪಟ್ಟಣದಲ್ಲೂ ಸಹ ಬಿರುಗಾಳಿ ಜೋರಾಗಿದ್ದು, ಕೆಲವೊತ್ತು ಅಲ್ಪ ಮಳೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap