ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ಬೊಮ್ಮದೇವರಹಟ್ಟಿ ದೇವರ ಎತ್ತುಗಳಿಗೆ ಎರಡು ಲೋಡ್ ಹುಲ್ಲನ್ನು ನೀಡುವ ಮೂಲಕ ಮೂಕ ಪ್ರಾಣಿಗಳು ಹಸಿವಿನಿಂದ ತೊಂದರೆಗೊಳಗಾಗದಂತೆ ಎಚ್ಚರಿಕೆ ವಹಿಸಲಾಯಿತು. ಸಿಂಡಿಕೆಟ್ ಬ್ಯಾಂಕ್ನಿವೃತ್ತ ಅಧಿಕಾರಿ, ಕರ್ನಾಟಕ ವಿಭೂಷ ಪ್ರಶಸ್ತಿ ವಿಜೇತ ಎನ್.ಆರ್.ನಾಗರಾಜು, ವೈಭವ ಲಾರಿ ಟ್ರಾನ್ಸ್ಪೋರ್ಟ್ನ ಓಬಣ್ಣ, ಕೆ.ಶಿವಕುಮಾರ್, ಯರ್ರಿಸ್ವಾಮಿ ಕರಿಬಸಪ್ಪ, ನಲ್ಲೂರಹಳ್ಳಿ ಕೃಷ್ಣ, ಮಂಜು ಮುಂತಾದವರು ತಾವೇ ವೈಯಕ್ತಿಕವಾಗಿ ಸಂಗ್ರಹಿಸಿದ ಎರಡು ಲೋಡ್ ಹುಲ್ಲನ್ನು ಮಂಗಳವಾರ ಬೊಮ್ಮದೇವರಹಟ್ಟಿಗೆ ತೆರಳಿ ಅಲ್ಲಿನ ನೂರಾರು ಜಾನುವಾರುಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೊರೆನಾಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದೊರೆ ಬೈಯಣ್ಣ, ಅಪ್ಪಣ್ಣ, ಗ್ರಾಮ ಮುಖಂಡ ತಿಪ್ಪೇಸ್ವಾಮಿ, ಬಿ.ರಾಜಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನಾಯತ್ ಪಾಷ ಮುಂತಾದವರು ಉಪಸ್ಥಿತರಿದ್ದರು. ಕಿಲಾರಿಗಳಾದ ಗೌಡ್ರಪಾಪಣ್ಣ, ಪಾಲಯ್ಯ, ಚಿನ್ನಯ್ಯ, ಜೋಗಯ್ಯ, ಬೋರಯ್ಯ ಜಾನುವಾರುಗಳಿಗೆ ಹುಲ್ಲನ್ನು ನೀಡಿದ ಎಲ್ಲರನ್ನೂ ಅಭಿನಂದಿಸಿದರು. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
