ಹಾವೇರಿ
: ನಗರದ ನಗರಸಭೆ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ತರುಣ ಸಂಘದ ವತಿಯಿಂದ ಕೋರೊನಾ ವೈರಸ್ ನಿಂದ ದೇಶವೇ ಲಾಕ್ ಡೌನಲ್ಲಿಯೂ ತಮ್ಮ ಸೇವಾ ಕಾರ್ಯ ಮಾಡುತ್ತಿರುವ ನಗರಸಭೆ ಪೌರಕಾರ್ಮಿಕರಿಗೆ ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರಿಗೆ ಉಪ್ಪಿಟ್ಟು,ಸಿರಾ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಪೊಲೀರಿಗೆ ಅಲ್ಲಿಗೆ ಹೋಗಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ. ಮಾಜಿ ಮುಖ್ಯೋಪಾಧ್ಯಾಯರಾದ ಮಾಲತೇಶ ಕರ್ಜಗಿ. ನಾಗೇಶ ಯಲ್ಲಪ್ಪ ಮಾಳಗಿ.
ನಿಂಗರಾಜ ದಂಡೆಮ್ಮನವರ.ಮಾಲತೇಶ ದೇವಿಹೂಸೂರ ಸೇರಿದಂತೆ ಡಿಎಸ್ಎಸ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ತರುಣ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿ ತಮ್ಮ ಸೇವಾ ಕಾರ್ಯ ಮಾಡಿದರು.
