ಚಿತ್ರದುರ್ಗ
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಕಾರಿ ರಾಘವೇಂದ್ರ ರಾವ್ ಹೇಳಿದರು.
ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದ ಭೂ ಭಾಗದಲ್ಲಿ ಶೇ.33ರಷ್ಟು ಇರಬೇಕಾದ ಕಾಡು ಕೇವಲ ಶೇ.22ರಷ್ಟು ಕಾಡು ಉಳಿದುಕೊಂಡಿದೆ. ಕಾಡಿನ ನಾಶ ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಯ ಜನಕ್ಕೆ ಕಾಡು ಉಳಿಯುವುದು ಕಷ್ಟ. ಕಾಡು ನಾಶವಾದರೆ ಕಾಡಿನ ಪ್ರಾಣಿಗಳಿಗೂ ತೊಂದರೆಯಾಗುತ್ತದೆ. ಕಾಡಿನ ಜೊತೆ ಕಾಡು ಪ್ರಾಣಿಗಳನ್ನು ಸಹ ನಾವು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದೇವೆ. ಕಾಡು ಇದ್ದರೆ ನಮಗೆ ಸಮೃದ್ಧ ಮಳೆ ಬರುತ್ತದೆ. ಮನುಷ್ಯ ತನ್ನ ಅನುಕೂಲಕ್ಕೆ ಕಾಡು ನಾಶ ಮಾಡುತ್ತಿದ್ದಾನೆ ಎಂದರು.
ನಿಮ್ಮ ಮನೆಯ ಸುತ್ತಮುತ್ತ ಪರಿಸರ ಕಾಪಾಡಿಕೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಗಳಲ್ಲಿ ಹಸಿ ಕಸ ಒಣ ಕಸವನ್ನು ಸರಿಯಾಗಿ ವಿಂಗಡಣೆ ಮಾಡಬೇಕು. ಮನೆಯ ಪರಿಸರದಲ್ಲಿ ಸಸಿ ನೆಟ್ಟು ಅದರ ಪಾಲನೆಪೋಷಣೆ ಮಾಡಿ. ನಿಮ್ಮ ತಂದೆ ತಾಯಿಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡುವಂತೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಆರ್ಎಫ್ಒ ಜಿ.ಎಸ್.ಸಂದೀಪ್ ನಾಯಕ್ ಮಾತನಾಡಿ, ಪ್ರತಿಯೊಬ್ಬರು ಮರ ಬೆಳಸಬೇಕು ಎಂದು ಹೇಳಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು.
ಪರಿಸರ ದಿನಾಚರಣೆಗೆ ಮಾತ್ರ ಪರಿಸರದ ಬಗ್ಗೆ ಮಾತನಾಡದೆ ವರ್ಷ ಪೂರ್ತಿ ಪರಿಸರದ ಬಗ್ಗೆ ಚರ್ಚೆ, ಪರಿಸರದ ಕೆಲಸಗಳು ನಡೆಯಬೇಕು. ಕಳೆದ ವರ್ಷ ಕೊಡಗುವಿನಲ್ಲಿ ಮಳೆ ಸುರಿದು ಆದ ಅನಾಹುತ್ತಕ್ಕೆ ಮನುಷ್ಯನೇ ಕಾರಣ. ಅಲ್ಲಿನ ಪರಿಸರದಲ್ಲಿ ಇದ್ದ ಮರಗಳನ್ನು ಕಡಿದ ಪರಿಣಾಮ ಕಳೆದ ವರ್ಷದ ಮಳೆ ನಮಗೆ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಅಂತಹ ತಪ್ಪು ಆಗದಂತೆ ನಾವು ಎಚ್ಚರ ವಹಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು. ನಂತರ ಪರಿಸದ ಬಗ್ಗೆ ಜಾಗೃತಿ ಮೂಡಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಉಪ ವಲಯ ಅರಣ್ಯಾಕಾರಿ ಪ್ರದೀಪ್ ಕೇಸರಿ, 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಜಿ ಸುರೇಶ್ ಬಾಬು, ವಿದ್ಯಾ ವಿಕಾಸ ಶಾಲೆಯ ಮುಖ್ಯ ಶಿಕ್ಷಕ ಸಂಪತ್ತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
