ಸವಣೂರ :
ಮಾನವನ ಬದುಕಿಗೆ ಕಣ್ಣುಗಳು ಅತಿ ಅವಶ್ಯಕವಾಗಿದ್ದು, ಅವುಗಳ ಸಂರಕ್ಷಣೆ ಮಾಡಲು ವೈಧ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಬಹಳ ಮುಖ್ಯ.ಅಂಧತ್ವ ನಿವಾರಣೆಗೆ ಉಚಿತ ತಪಾಸಣಾ ಶಿಬಿರಗಳು ಉಪಯುಕ್ತಗಳಾಗಿವೆ ಎಂದು ವಿರಕ್ತ ಮಠದ ಮ.ನಿ.ಪ.ನಿಜಗುಣ ಶಿವಯೋಗಿಗಳು ಹೇಳಿದರು.
ಸವಣೂರ ತಾಲೂಕಿನ ಹತ್ತಿಮತ್ತೂರ ಗ್ರಾಮದ ಶ್ರೀ ವಿರಕ್ತಮಠದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.ಅಮ್ಮಾ ಸಂಸ್ಥೆ (ರಿ) ಹಿರೇಮುಗದೂರ ,ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣ ಸಮಿತಿ ಸವಣೂರ. ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ ಹಾವೇರಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಹತ್ತಿಮತ್ತೂರ ಗ್ರಾಮದ ನಾಗರಿಕರ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಅವರು ಸಾನಿಧ್ಯವಹಿಸಿ ಮತನಾಡಿದರು.
ಜನರು ಎಷ್ಟೆ ಶ್ರೀಮಂತರಾದರೂ ಪ್ರಪಂಚವನ್ನು ನೋಡಬೇಕಾದರೆ, ಜೀವನದ ಬಹುಮುಖ್ಯವಾದ ಎಲ್ಲ ಕೆಲಸಗಳಿಗೆ ಕಣ್ಣುಗಳು ಬೇಕು. ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರ ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂದು ಹಾರ್ಶಿವಚನದಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮಲ್ಲಾಡದ ಹಾಗೂ ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರದ ಮುಖ್ಯಸ್ಥರಾದ ಇಸ್ಮಾಯಿಲ್ಸಾಬ ಬುಡಂದಿ ಮಾತನಾಡಿ ಸಾಮಾಜಿಕ ಕಳಕಳಿಯಿಂದ ಸಮಾಜದ ಕೆಲಸಗಳಿಗೆ ವಿದ್ಯಾವಂತರು ಹಾಗೂ ಸಾರ್ವಜನಿಕರು ಮುಂದಾಗಬೇಕು. ನಮ್ಮ ಕೆಲಸಗಳ ಮೇಲೆ ದೇಶದ ಪ್ರಗತಿಗೆ ಪೂರಕವಾಗುತ್ತದೆ.
ನಾವೇಲ್ಲರೂ ಸೇವಾಭಾವದಿಂದ ಹಿರಿಯರ ಸೇವೆ ಮಾಡಲು ಮುಂದಾಗೋಣ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡ ಫಕ್ಕಿರೇಶ ಕಾಳಿ.ಹಡಪದ ಶ್ರೀ ಅಪ್ಪಣ್ಣ ವಿವಿದ್ಯೋದ್ದೇಶಗಳ ಸಂಘದ ಅಧ್ಯಕ್ಷ ಸಿದ್ಲಿಲಿಂಗಪ್ಪ ಅಜ್ಜಣ್ಣನವರ.ಮಲ್ರ್ಲಿಕಾರ್ಜುನ ಚಿಕ್ಕಳಿ.ಶಂಕರ ಆಸ್ಪತ್ರೆಯ ರವಿಕುಮಾರ, ಶಂಕರ ನಾಯ್ಕ. ಅಮ್ಮಾ ಸಂಸ್ಥೆ(ರಿ) ಪದಾಧಿಕಾರಿಗಳು.ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು. 50ಕ್ಕೂ ಹೆಚ್ಚು ಹಿರಿಯರು ಶಿಬಿರದ ಸದುಪಯೋಗ ಪಡಿಸಿಕೊಂಡರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
