ಹೊಸಪೇಟೆ :
ನಗರದ ಸಮಾಜ ಸೇವಕ ಪಂತರ ಜಯಂತರವರ ಮನೆಯ ಆವರಣದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಮಂಗಳವಾರ ನಡೆಯಿತು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಅಹನಾ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿ.ಹೊಸಪೇಟೆ ಮತ್ತು ಎಸ್.ಡಿ.ಎಮ್ ನಾರಾಯಣ ಹಾರ್ಟ ಸೆಂಟರ್, ಧಾರವಾಡ ಇವರ ಸಂಯಕ್ತಾಶ್ರಯದಲ್ಲಿ ನಡೆದ ಶಿಬಿರವನ್ನು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಉಚಿತ ಹೃದಯ ತಪಾಸಣಾ ಶಿಬಿರಗಳನ್ನು ನಡೆಸಲು ಸಹಕಾರ ನೀಡಿದರೆ, ಬಡ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಇಂಥ ಅನೇಕ ಶಿಬಿರಗಳನ್ನು ಎಲ್ಲರೂ ಸೇರಿ ನಡೆಸಬಹುದು ಎಂದರು.
ಶಿಬಿರದಲ್ಲಿ ಎಸ್.ಡಿ.ಎಂ ವೈಧ್ಯರು 207 ಜನರನ್ನು ತಪಾಸಣೆ ಮಾಡಿದರು. ಸರ್ಕಾರಿ ನೌಕರರು, ಅಹನಾ ಬ್ಯಾಂಕ್ ನಿರ್ದೇಶಕರು, ಸಾರ್ವಜನಿಕರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
