ತಿಪಟೂರು :
ಸರ್ಕಾರದ ಯೋಜನೆಗಳು ರೈತರಿಗೆ ವರದಾನವಾಗಿದ್ದು ಪ್ರತಿಯೊಬ್ಬ ರೈತರುಇದರ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಶಾಸಕ ಬಿ.ಸಿ.ನಾಗೇಶ್ ಸಲಹೆ ನೀಡಿದರು.
ಸೋಮವಾರ ಬೆಳಗ್ಗೆ ಕೃಷಿ ಇಲಾಖೆಯ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮೊದಲನೆಯದಾಗಿ ಕಸಬಾ ಹೋಬಳಿ ಹಿಂಡಿಸ್ಕೆರೆಗ್ರಾಮದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕೃಷಿ ಯಂತ್ರಧಾರೆಯನ್ನು ಉದ್ಘಾಟಸಿ ಮಾತನಾಡಿದ ಅವರು ರೈತರಿಗೆ ರಿಯಾಯಿತಿ ಧರದಲ್ಲಿ ಬಾಡಿಗೆಗೆ ಕೃಷಿ ಉಪಕರಣ, ಯಂತ್ರೋಪಕರಣಗಳು ಲಭ್ಯವಿದ್ದು ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಲು ತಿಳಿಸಿದರು.
ನಂತರ ಕಸಬಾ ಹೋಬಳಿ ಈಚನೂರುಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ-2020 ಕಾರ್ಯಕ್ರಮದ ಮಾಹಿತಿರಥಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರೈತರುತಮ್ಮಜಮೀನಿನ ಮಾಹಿತಿಯನ್ನು ಬೆಳೆ ಸಮೀಕ್ಷೆಆಪ್ಡೌನ್ಲೋಡ್ ಮಾಡಿಕೊಂಡುಜಮೀನಿನ ವಿವರಗಳನ್ನು ಆ.24 ರೊಳಗೆ ಅಪ್ಲೋಡ್ ಮಾಡಲು ತಿಳಿಸಿದರು.
ಗೋ ಕಟ್ಟೆಗೆ ಬಾಗಿನ:
ಕೃಷಿ ಇಲಾಖೆ ವತಿಯಿಂದ ನಾರಸಿಕಟ್ಟೆ ಗ್ರಾಮದಲ್ಲಿ ರವೀಶ್ಜಮೀನಿನಲ್ಲಿ ಬರಗಾಲ ತಡೆಯುವಿಕೆ ಯೋಜನೆಯಡಿಗೋಕಟ್ಟೆಯನ್ನು ನಿರ್ಮಿಸಿದ್ದು ಉತ್ತಮ ಮಳೆಯಾದ್ದರಿಂದ ಗೋಕಟ್ಟೆಯು ಭರ್ತಿಯಾಗಿದ್ದು ಶಾಸಕರುಗ್ರಾಮಸ್ಥರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದರು.
ಕಾರ್ಯಕ್ರಮಗಳಲ್ಲಿ ಕೃಷಿ ಇಲಾಖೆಯ ತುಮಕೂರು ವಿಭಾಗದ ಉಪ ಕೃಷಿ ನಿರ್ದೇಶಕ ಡಿ ಉಮೇಶ್, ಸಹಾಯಕ ಕೃಷಿ ನಿರ್ದೇಶಕರಾದಎನ್. ಕೆಂಗೇಗೌಡ, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕಡಾ.ನವೀನ್, ಕಸಬಾ ಹೋಬಳಿ ಕೃಷಿ ಅಧಿಕಾರಿಡಾ.ಸವಿತಾಎಂ.ಜಿ ಹಾಗೂ ಆತ್ಮಯೋಜನೆಯ ಮಹೇಶ್ ನೀಲಗಾರ್ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
