ಸರ್ಕಾರಿ ಕಾಲೇಜುಗಳು ಮಾದರಿಯಾಗಿವೆ : ಸುರೇಶ್‍ಕುಮಾರ್

ತಿಪಟೂರು :

    ತಿಪಟೂರಿನಲ್ಲಿರುವ ಸರ್ಕಾರಿ ಕಾಲೇಜುಗಳು ರಾಜ್ಯದ ಕಾಲೇಜುಗಳಿಗೆ ಮಾದರಿಯಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅಭಿಪ್ರಾಯ ಪಟ್ಟರು.

    ನಗರದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜುಗಳಲ್ಲಿನ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಇಂದು ಬಹಳ ಸಂತೋಷವಾಗುತ್ತಿದೆ. ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲೆಯಲ್ಲಿ ಸುಮಾರು 800 ಮಕ್ಕಳು ಪಿ.ಯು.ಸಿ.ಯಲ್ಲಿ 400 ಮಕ್ಕಳು ಎಂದು ಕೇಳಿ ಸಂತೋಷವಾಯಿತು.

     ಆದರೆ ಇಲ್ಲಿಗೆ ಬಂದು ಅಂದರೆ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಯಲ್ಲಿಯೇ 1910 ವಿದ್ಯಾರ್ಥಿಗಳು ಇರುವುದನ್ನು ಕಂಡು ಇನ್ನು ಸಂತೋಷವಾಯಿತು. ಇಂದು ಸರ್ಕಾರಿ ಶಾಲಾ ಕಾಲೇಜುಗಳೆಂದರೆ ಮೂಗುಮುರಿಯುವ ಜನರಿದ್ದು ಆದರೆ ಇಂತಹ ಸಮಯದಲ್ಲಿ ಇಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರ ಕೆಲಸವನ್ನು ಶ್ಲಾಘಿಸುವಂತಹದ್ದು.

     ಇಲ್ಲಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಇವರುಗಳೇ ಸಾಕ್ಷಿ ಎಂದ ಅವರು, ನಾನು ಒಂದು ಬಾರಿ ಉತ್ತರ ಕರ್ನಾಟಕದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ 1 ರಿಂದ 5 ನೇ ತರಗತಿಯವರೆಗೆ ನಂದಿನಿ ಎಂಬ ಒಬ್ಬಳೇ ವಿದ್ಯಾರ್ಥಿನಿ ಇದ್ದಳು. ಆ ಮಗುವಿನ್ನು ನಾನು ಮಾತನಾಡಿಸಿ ನಿನಗೆ ತರಗತಿಯಲ್ಲಿ ಏನೇನು ಪಾಠಮಾಡುತ್ತಾರೆ ಎಂದಾಗ ಮಗು ಒಂದೊಂದೆ ಅವಧಿಯನ್ನು ಹೇಳಿತು.

     ಎಲ್ಲಾ ಮುಗಿದ ಮೇಲೆ ನನಗೆ ಮಧ್ಯಾಹ್ನದ ಮೇಲೆ 3.30 ರ ನಂತರದ ಅವದಿ üಎಂದರೆ ತುಂಬಾ ಇಷ್ಟ ಎಂದಿತು. ಆಗ ಏಕೆಂದು ಕೇಳಿದಾಗ ಅದು ನನ್ನ ಆಟದ ಸಮಯ ನಾನು ಆಟವಾಡುತ್ತೇನೆ ಎಂದಾಗ ನನಗೆ ತುಂಬಾ ನೋವಾಯಿತು. ಏಕೆಂದರೆ ಒಂದೇ ಮಗು ಏನನ್ನು ಆಟವಾಡಲು ಸಾಧ್ಯ. ಕೊನೆಗೆ ಶಿಕ್ಷಕರನ್ನು ವಿಚಾರಿಸಿದಾಗ ತಿಳಿಯಿತು ಆ ಮಗುಕೂಡ ಇಲ್ಲಿಯದ್ದಲ್ಲ ಬೇರೆ ಶಾಲೆಯದ್ದು. ಶಾಲೆಮುಚ್ಚಿಹೋಗುತ್ತದೆಂಬ ದೃಷ್ಟಿಯಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆಂದು. ರಾಜ್ಯದಲ್ಲಿ ಇಂತಹ ಶಾಲೆಗಳಿರುವಾಗ ನನಗೆ ತಿಳಿದಿರುವ ಹಾಗೆ ತಿಪಟೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾದÀರಿಯಾಗಿದೆ. ಇಲ್ಲಿ ಓದುತ್ತಿರುವ ನೀವುಗಳು ಸಹ ಏನನ್ನಾದರು ಸಾಧಿಸಿ ತಿಪಟೂರು ಮತ್ತು ನಿಮ್ಮ ಕಾಲೇಜಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

     ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಿಪಟೂರು ನಗರವು ಒಂದು ವಿದ್ಯಾಕೇಂದ್ರವಾಗಿ ಬೆಳೆಯುತ್ತಿದೆ. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಜಿಲ್ಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲು ಮುಂದಿದ್ದು ರಾಜ್ಯದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಇಂತಹ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಜೆ.ಇ.ಇ ತರಬೇತಿಯನ್ನು ಕೊಡಿಸ ಬೇಕೆಂಬ ಉದ್ದೇಶದಿಂದ ನಾನು ಯಾವುದಾರು ಕಂಪನಿಯ ಜೊತೆ ಇಲ್ಲಾ ಬ್ಯಾಂಕ್‍ನ ಸಿ.ಎಸ್.ಆರ್ ಫಂಡ್‍ನಿಂದ ಒಂದು ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

      ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಕಾಲೇಜಿಗೆ ನಾವು ಕಲ್ಪಿಸಬೇಕಾಗಿರುವ ಮೂಲಭೂತ ಸೌಕರ್ಯದ ಕೊರತೆಯಿದ್ದು ಮುಂದಿನ ದಿನಗಳಲ್ಲಿ ಎಲ್ಲವನ್ನು ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ಉಪವಿಭಾಗಾಧಿಕಾರಿ ನಂದಿನಿ, ತಹಸೀಲ್ದಾರ್ ಆರತಿ, ಡಿ.ಡಿ.ಪಿ.ಐ ಕಾಮಾಕ್ಷಮ್ಮ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಪ್ರಾಂಶುಪಾಲ ಅಲ್ಲಮಪ್ರಭು ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link