ಹಾವೇರಿ :
ಡಾ|| ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವ ಮೂಲಕ ಎಲ್ಲ ವರ್ಗದ ಜನರ ಏಳಿಗೆ ಬಯಸುವ ವಿಶ್ವನಾಯಕರಾಗಿ ಸಮಸಮಾಜದ ನಿರ್ಮಾಣಕ್ಕೆ ಬುನಾದಿಯ ತತ್ವ ಆದರ್ಶಗಳನ್ನು ನೀಡಿದವರಾಗಿದ್ದಾರೆ ಎಂದು ಮುಖಂಡ ಮರಿಯಪ್ಪ ನಡುವಿನಮನಿ ಹೇಳಿದರು.
ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಡಾ|| ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅವರ 128 ನೇ ಜಯಂತಿಯಂದು ಅವರು ಮಾತನಾಡಿದರು. ಬಾಬಾ ಸಹೇಬ ಅಂಬೇಡ್ಕರ್ ದೇಶದ ಶೋಷಿತರ,ಹಿಂದುಳಿದವರ ಹಾಗೂ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಪ್ರಜಾಪ್ರಭುತ್ವದ ತತ್ವದ ಅಡಿ ಬದುಕಿಗೆ ಶಕ್ತಿಯಾಗಿ ಬೆಳೆದವರು.ಇಂದು ಮಾನವೀಯತೆ ಹಾಗೂ ಸಮಾನತೆಯ ಬದುಕಿಗೆ ಡಾ|| ಬಿಆರ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ.
ಅವರು ವ್ಯಕ್ತಿಗಿಂತ ಆದರ್ಶಪ್ರಾಯ ದೇಶದ ಶಕ್ತಿಯಾಗಿ ಬೆಳೆದವರು. ನಾವೆಲ್ಲರೂ ಶಿಕ್ಷಣ, ಸಂಘಟನೆ ಹಾಗೂ ನಮ್ಮತನದ ಹೋರಾಟಕ್ಕೆ ಮುಂದಾಗಿ ಸರ್ವಾಗಿಣ ಅಭಿವೃದ್ಧಿಗೆ ಸ್ವಾಭಿಮಾನಿಯಾಗಿ ದುಡಿದು ಅವರ ನೀಡಿದ ತತ್ವ ಆದರ್ಶಗಳನ್ನು ಪಾಲಿಸೋಣ ಎಂದು ಮರಿಯಪ್ಪ ನಡುವಿನಮನಿ ಸಮಾಜದ ಬಾಂಧವರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಪ್ಪ ಹೊಸಮನಿ,ಗುಡ್ಡಪ್ಪ ಕಾಳಿ, ಫಕ್ಕಿರೇಶ ಕಾಳಿ,ಅಶೋಕ ಅಳ್ಳಳ್ಳಿ,ಮಂಜಪ್ಪ ನಡುವಿನಮನಿ,ಬಸವರಾಜ ಕೆ, ಗುಡ್ಡಪ್ಪ ನಡುವಿನಮನಿ,ಬಸವರಾಜ ಹೊಸಮನಿ,ಮಂಜಪ್ಪ ಅಳ್ಳಳ್ಳಿ,ಅಡಿವೆಪ್ಪ ಯಲ್ಲಣ್ಣನವರ,ಫಕ್ಕಿರೇಶ ಹೆಬ್ಬಾಳ,ಕೊಟೆಪ್ಪ ಎನ್, ಅಶೋಕ ಹೊಸಮನಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳಾದ ಪರಶುರಾಮ ಹೊಳೆಂಚಿ,ಗುಡ್ಡಪ್ಪ ಆರೇರ ಗ್ರಾಮದ ಡಾ|| ಬಿಆರ್ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು,ವಿದ್ಯಾರ್ಥಿಗಳು, ಸಮಾಜ ಭಾಂದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
