ಹೂವಿನಹಡಗಲಿ/ ಬೆಂಗಳೂರು :

ಕೆ.ಪಿ.ಸಿ.ಸಿ. ಅಧ್ಯಕ್ಷರ ಆಯ್ಕೆಯಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಕೆ.ಪಿ.ಸಿ.ಸಿ. ಅಧ್ಯಕ್ಷರ ಆಯ್ಕೆ ವರಿಷ್ಠ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು. ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗಮಾಧ್ಯದಲ್ಲಿ ತಾಲೂಕಿನ ಮಿರಾಕೊರ್ನಹಳ್ಳಿ ವಸತಿ ಶಾಲೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷರನ್ನಾಗಿ ವರಿಷ್ಟರು ಯಾರನ್ನೇ ಆಯ್ಕೆ ಮಾಡಿದರು ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.
ಇತ್ತೀಚೆಗೆ ಬಳ್ಳಾರಿಯಲ್ಲಿ ಶಾಸಕ ಸೋಮಶೇಖರರೆಡ್ಡಿಯವರ ಪ್ರಚೋದನಾಕಾರಿ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ಎಚ್.ಕೆ.ಪಾಟೀಲರು ಸೋಮಶೇಖರರೆಡ್ಡಿಯವರ ಮೇಲೆ ಬಿಜೆಪಿ ಪಕ್ಷದ ಅಮಿತ್ಷಾ ಮತ್ತು ಮುಖ್ಯಮಂತ್ರಿಯವರು ಕೂಡಲೇ ಕ್ರಮ ಜರುಗಿಸಬೇಕೆಂದು ಹೇಳಿದರು.
ಕಾಂಗ್ರೆಸ್ನವರ ಪ್ರಚೋದನಾಕಾರಿ ಭಾಷಣಕ್ಕೆ ಪ್ರತಿಯಾಗಿ ಸೋಮಶೇಖರರೆಡ್ಡಿಯವರು ಇಂತಹ ಹೇಳಿಕೆಯನ್ನು ನೀಡಿದ್ದಾರೆಂದು ಉಪಮುಖ್ಯಮಂತ್ರಿ ಸವದಿಯವರು ಪ್ರತಿಕ್ರಿಯಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಹೆಚ್.ಕೆ.ಪಾಟೀಲರು, ಕಾಂಗ್ರೆಸ್ನವರಾದ ನಾವು ಎಲ್ಲಿಯೂ ಕೂಡಾ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿಲ್ಲ ಎಂದರು.
ಶಾಸಕ ಜಮೀರ್ ಆಹ್ಮದ್ರವರು ಬಳ್ಳಾರಿಗೆ ಬಂದು ಸೋಮಶೇಖರರೆಡ್ಡಿಯವರ ಮನೆಯ ಮುಂದೆ ಪ್ರತಿಭಟಿಸುವುದಾಗಿ ಹೇಳಿರುವ ಹೇಳಿಕೆ ಕುರಿತು ನನಗೆನು ಗೊತ್ತಿಲ್ಲ ಎಂದ ಪಾಟೀಲರು, ಪೌರತ್ವ ತಿದ್ದುಪಡಿ ಕಾಯ್ದೆ ಸೌಹಾರ್ದತೆಯನ್ನು ಕದಡುವಂತಹ ಕೆಲಸ ಮಾಡುತ್ತಿದೆ, ಧರ್ಮದ ಹೆಸರಿನಲ್ಲಿ ಬಿಜೆಪಿಯವರು ರಾಜಕಾರನ ಮಾಡುತ್ತಿದ್ದಾರೆ ಎಂದರು.ಸಂದರ್ಭದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
