ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್ ನಾಯಕರಿಂದ ಬುದ್ಧಿವಾದ

ಬೆಂಗಳೂರು:

        ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿಯನ್ನು ಸಮಾಧಾನಪಡಿಸಲು ಕಾಂಗ್ರೆಸ್ ಶತ ಪ್ರಯತ್ನಪಡುತ್ತಿದೆ.ಆದರೆ ಇದುವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಭೇಟಿಗೆ ಸಿಕ್ಕಿಲ್ಲ. ಇದರ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್ ನಾಯಕರು ಬುದ್ಧಿವಾದ ಹೇಳಿದ್ದಾರೆ.

        ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸತೀಶ್ ಜಾರಕಿಹೋಳಿಗೆ ಕೆಲವು ಸೂಚನೆ ನೀಡಿದ್ದು,ರಮೇಶ್ ಜಾರಕಿಹೊಳಿಗೆ ಬುದ್ಧಿವಾದ ಹೇಳಿ, ಯಾವುದೇ ದುಡುಕಿನ ನಿರ್ಧಾರ ಸರಿಯಲ್ಲ.ಕಾಂಗ್ರೆಸ್‍ನಲ್ಲಿ ಉತ್ತಮ ಭವಿಷ್ಯವಿದೆ. ಎಲ್ಲ ಸಹೋದರರು ಸೇರಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡದಂತೆ ಕಿವಿಮಾತು ಹೇಳಿ. ನೀವೆಲ್ಲರೂ ಸೇರಿ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

         ಇನ್ನು ಸಚಿವ ಸತೀಶ್ ಜಾರಕಿಹೋಳಿ, ಬಾಲಚಂದ್ರ ಜಾರಕಿಹೋಳಿ ಹಾಗೂ ಲಕನ್ ಜಾರಕಿಹೋಳಿಗೆ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಹಲವು ಬಾರಿ ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ.ರಮೇಶ್ ಜಾರಕಿಹೋಳಿ ಮನವೊಲಿಕೆಗೆ ಕಾಂಗ್ರೆಸ್ ನಾಯಕರ ಕಸರತ್ತು ಮುಂದುವರೆದಿದೆ. ಆದರೆ ಕಾಂಗ್ರೆಸ್ ನಾಯಕರ ಫೋನ್ ಸಂಪರ್ಕಕ್ಕೆ ರಮೇಶ್ ಜಾರಕಿಹೋಳಿ ಇನ್ನೂ ಸಿಕ್ಕಿಲ್ಲ.ರಮೇಶ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಹೋದರರಿಗೆ ಫೋನ್ ಮಾಡಿ ಮನವರಿಕೆ ಮಾಡಿದ್ದಾರೆ.

         ಪಕ್ಷದ ವರಿಷ್ಠರ ಸಲಹೆಯಂತೆ ಸಹೋದರರ ಭೇಟಿಗಾಗಿ ಸಚಿವ ಸತೀಶ ಜಾರಕಿಹೋಳಿ ಗೋಕಾಕ್‍ಗೆ ತೆರಳಿದ್ದರು.ಆದರೆ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದರಿಂದ ಮಾತುಕತೆ ಸಾಧ್ಯವಾಗದೇ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.ಬಾಲಚಂದ್ರ ಜಾರಕಿಹೋಳಿ ಹಾಗೂ ಲಕನ್ ಜಾರಕಿಹೋಳಿ ಸಹ ಸಿಗದೇ ಸತೀಶ ಜಾರಕಿಹೋಳಿ ವಾಪಸ್ ಆಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap