ಕೆರೆಗಳ ಅಭಿವೃದ್ಧಿಗೆ ಮುಂದಾದ ಸಿದ್ಧಾರ್ಥ ವಿ.ವಿ.

ತುಮಕೂರು

    ಈಗಾಗಲೇ ಮರ-ಗಿಡಗಳು ಬೆಳೆದು ಹೂಳು ತುಂಬಿಕೊಂಡು ಬತ್ತಿ ಹೋಗಿರುವ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಯೋಜನೆಯೊಂದನ್ನು ಕೈಗೊಳ್ಳಲು ಸಿದ್ಧಾರ್ಥ ವಿಶ್ವವಿದ್ಯಾಲಯವು ಮುಂದಾಗಿದೆ ಎಂದು ಸಿದ್ಧಾರ್ಥ ವೈದ್ಯಕೀಯ ಸಂಸ್ಥೆಯ ಡಾ|| ಶೆಟ್ಟಿ ತಿಳಿಸಿದ್ದಾರೆ.

     ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರಥಮ ಹಂತದಲ್ಲಿ ತುಮಕೂರು ತಾಲೂಕಿನ ಹೆಗ್ಗೆರೆ, ಭೀಮಸಂದ್ರ, ಕುಂಕುಮನಹಳ್ಳಿ, ಮಲ್ಲಸಂದ್ರ, ಮೂಕನಳ್ಳಿಪಟ್ಣ, ಬಳ್ಳಾಪುರ, ಅಡಗೂರು, ಕಣೇನಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

     ವಿನಾಶದ ಅಂಚಿನಲ್ಲಿರುವ ಕೆರೆಗಳಲ್ಲಿ 10 x 10 x 10 ಅಡಿ ಅಳತೆಯಲ್ಲಿ ಉದ್ದ, ಅಗಲ ಹಾಗೂ ಆಳದ ಹೊಂಡಗಳನ್ನು ನಿರ್ಮಿಸಲಾಗುವುದು. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗಲಿದೆ. ಅಕ್ಕ-ಪಕ್ಕದ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರು ತುಂಬಿಕೊಂಡು ಬೇಸಿಗೆ ಕಾಲದಲ್ಲಿ ತಲೆದೋರುವ ನೀರಿನ ಬವಣೆ ತಪ್ಪುತ್ತದೆ.

      ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ಇದೇ ರೀತಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯ ಕೆರೆಗಳ ಸಂಪೂರ್ಣ ಚಿತ್ರಣ ಬದಲಾಗಲಿದ್ದು, ಸಾರ್ವಜನಿಕರು ಇದರ ಅನ್ವೇಷಣೆ ಮಾಡಬಹುದಲ್ಲದೆ ಇಂದಿನ ಕೆರೆಗಳ ಚಿತ್ರಣ ಹಾಗೂ ಅಭಿವೃದ್ಧಿಯಾದ ಕೆರೆಗಳ ಚಿತ್ರಣದ ವ್ಯತ್ಯಾಸವನ್ನು ಕಾಣಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap