ಲಂಚಕೋರರ ವಿರುದ್ಧ ತಿರುಗಿಬಿದ್ದ ರೈತರು..!!

ಹಾನಗಲ್ಲ :
   
       ರೈತರ ತೆರಿಗೆ ಹಣ ತಿಂದು ಭ್ರಷ್ಟಾಚಾರದಿಂದ ಜೀವನ ನಡೆಸುವ ಸರಕಾರಿ ಅಧಿಕಾರಿಗಳಿಗೆ ರೈತರ ಮೇಲೆ ಸೇಡು ತೀರಿಸುಕೊಳ್ಳುವ ಕುಹಕ ಬುದ್ಧಿ ಬಂದಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇಡೀ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಿ ನ್ಯಾಯ ಪಡೆಯಲು ನಾವು ಸಿದ್ಧ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಗುಡುಗಿದರು.
      ಶನಿವಾರ ಇಲ್ಲಿನ ಮಹಾತ್ಮಾಗಾಂಧೀ ವೃತ್ತದಲ್ಲಿ ಹಾನಗಲ್ಲ ತಾಲೂಕಿನ ರೈತ ಸಂಘದ ಮುಖಂಡರು ರೈತರು ಪ್ರತಿಭಟನೆ ನಡೆಸಿದರು. 2018 ರ ಜುಇಲೈ ತಿಂಗಳಿನಲ್ಲಿ ಹಾವೇರಿಯ ಸಿದ್ದಪ್ಪ ವೃತ್ತದಲ್ಲಿ ನಡೆದ ಬೆಳೆವಿಮೆ, ಸಾಲ ಮನ್ನಾ ಸೌಲಭ್ಯಕ್ಕಾಗಿ ನಡೆದ ಹೋರಾಟಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದರಿಂದ ಶುಕ್ರವಾರ ಹಾವೇರಿಯಲ್ಲಿ ರೈತ ನಾಯಕರನ್ನು ಬಂಧಿಸಿದ್ದು ಅನಗತ್ಯ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ.
     
       ರೈತರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರೆ ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸಿ ರೈತ ಸಂಘಟನೆಗಳನ್ನು ಹತ್ತಿಕ್ಕುವ ಕುತಂತ್ರ ಮಾಡುತ್ತಾರೆ. ಆದರೆ ಇದಕ್ಕೆ ನಾವು ಜಗ್ಗುವುದಿಲ್ಲ. ನಮ್ಮ ಅಗತ್ಯ ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರ ಎಂದ ಅವರು, ಆಧಿಕಾರಿಗಳೇ ನೀವು ಎಷ್ಟು ಪ್ರಾಮಾಣಿಕರು ಎಂದು ನೋಡಿಕೊಳ್ಳಿ.
        ರೈತರ ಕೊಟ್ಟ ತೆರಿಗೆ ಹಣದಿಂದಲೇ ನಿಮ್ಮ ಸಂಸಾರ ನಡೆಯುತ್ತದೆ. ಇದಲ್ಲದೆ ರೈತರನ್ನೇ ಸುಲಿದು ತಿಂದು, ಮತ್ತೆ ರೈತರ ಮೇಲೆ ಪ್ರಕರಣ ದಾಖಲಿಸಿ ಆನಂದ ಅನುಭವಿಸುವುದು ಕ್ರೂರ ಕೃತ್ಯ. ಅಧಿಕಾರಿಗಳೇ ಹುಷಾರ್, ರೈತರನ್ನು ಮುಟ್ಟಿದರೆ ನೀವು ಸರಿಯಾದ ಶಿಕ್ಷೆ ಅನುಭವಿಸಬೇಕಾದೀತು. ಇಡೀ ರಾಜ್ಯದಲ್ಲಿ ರೈತ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡದಿದ್ದರೆ ಉಗ್ರ ಹೋರಾ ಎದುರಿಸಬೇಕಾದೀತು  ಎಂದು ಎಚ್ಚರಿಸಿದರು.
        ರೈತರೇ ಈಗಲಾದರೂ ಎಚ್ಚತ್ತುಕೊಳ್ಳಿ,  ರೈತ ಸಂಘಟನೆ ರೈತರ ಹಿತಕ್ಕಿದೆ. ನಾವು ಯಾರದೋ ದುಡ್ಡಿನ ಮೇಲೆ ಲಾಗ ಹಾಕುತ್ತಿಲ್ಲ. ನಮ್ಮ ಸ್ವಂತ ಜೇಬಿನ ದುದ್ದು ಖರ್ಚು ಮಾಡಿ ಇಡೀ ರೈತ ಸಮುದಾಯದ ಹಿತಕ್ಕೆ ದುಡಿಯುತ್ತಿದ್ದೇವೆ. ರೈತ ವಿರೋಧಿ ಆದಿಕಾರಿಗಳ ವಿರುದ್ಧ ಸಿಡಿದೇಳದಿದ್ದರೆ ನಾಳೆ ನಮ್ಮ ಪೀಳಿಗೇಯನ್ನೇ ನಾಶ ಮಾಡು ಈ ಆಧಿಕಾರಿಗಳು ಹಿಂದೆ ಸರಿಯುವುದಿಲ್ಲ. ಈಗಲಾದರು ಎಚ್ಚರಗೊಳ್ಳಿ ಎಂದು ತಿಳಿಸಿದ ಮರಿಗೌಡ ಪಾಟೀಲ, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಆದರೆ ಸುಳ್ಳು ಪ್ರಕರಣ ದಾಖಲಿಸಿದವರ ನಮ್ಮ ಪ್ರತಿಭಟನೆ ಇದೆ ಎಂದರು.
         ರೈತ ಮುಖಂಡ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ,  ಜನಪ್ರತಿನಿಧಿಗಳು ರೈತರ ಪಾಲಿಗೆ ಜೀವಂತವಾಗಿಲ್ಲ. ರೈತರಿಗೆ ಅನ್ಯಾಯವಾದರೂ ಕೇಳದ ಅವರು ಚುನವಣೆಗೆ ಮಾತ್ರ ಬರುತ್ತಾರೆ. ಆನಪ್ರತಿನಿಧಿಗಳ ಸಹಕಾರವಿಲ್ಲದೆ ಹಾನಗಲ್ಲ ತಾಲೂಕಿನ ರೈತರ 13 ಕೋಟಿ ರೂ ಬೆಳೆವಿಮೆ ಬಾಕಿ ಹೋರಾಟದಿಂದ ಪಡೆದಿದ್ದೇವೆ. ಇನ್ನು ಮುಂದೆ ಅಧಿಕಾರಗಳು ಹಾಗೂ ಜನಪ್ರತನಿಧಿಗಳನ್ನು ನಂಬದೇ ನಮ್ಮ ಹೋರಾಟ ಜೀವಂತಗೊಳ್ಳಬೇಕು. ನ್ಯಾಯಕ್ಕಾಗಿ ಜಯ ಸಿಕ್ಕೇ ಸಿಗುತ್ತದೆ ಎಂದರು.
         ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ತಹಶೀಲ್ದಾರ ಎಂ.ಗಂಗಪ್ಪ, ರೈತರ ಪರವಾಗಿ ನಾವಿದ್ದೇವೆ. ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಗಮನವಹಿಸುತ್ತೇವೆ. ನಿಮ್ಮ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದ ಅವರು, ಬೆಳೆ ವಿಮೆ ಸಂಬಂಧಿಸಿದ ಅಕ್ಕಿ ಭತ್ತ ವ್ಯತ್ಯಾಸದ ಹಣ ಇಷ್ಟರಲ್ಲೇ ರೈತರ ಖಾತೆಗೆ ಜಮಾ ಅಗಲಿವೆ. ಇದಕ್ಕಾಗಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
        ಹಾನಗಲ್ಲ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಾಜ್ಯ ಮುಖ್ಯ ಮಂತ್ರಿಗಳಿಗೆ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿಯೇ ತಹಶೀಲ್ದಾರರ ಮೂಲಕ ಮನವಿ ಅರ್ಪಿಸಿದರು.ಈ ಸಂದರ್ಭದಲ್ಲಿ ಪಿಎಸ್‍ಐ ವೀರೇಶ, ಎಎಸ್‍ಐ ಮುಂದಿನಮನಿ ಸೇರಿದಂತೆ ಪೊಲೀಸ ಬಂದೋಬಸ್ತ ಏರ್ಪಡಿಸಲಾಗಿತ್ತು.
         ರೈತ ನಾಯಕರಾದ ಮಲ್ಲೇಶಪ್ಪ ಆಲದಕಟ್ಟಿ, ಶ್ರೀಕಾಂತ ದುಂಡಣ್ಣನವರ, ವಾಸುದೇವ ಕಮಾಟಿ, ರಾಜು ದಾನಪ್ಪನವರ, ರುದ್ರಪ್ಪ ಹಣ್ಣಿ, ಗಂಗಾಧರ ಕೊಪ್ಪದ, ಸೋಮಣ್ಣ ಜಡೆಗೊಂಡರ, ಮರದಾನಸಾಬ ಬಡಗಿ, ಚನ್ನಬಸನಗೌಡ ಪಾಟೀಲ, ಮುಕ್ತಿಯಾರ ಬಾಳೂರ, ಮಲ್ಲನಗೌಡ ಪಾಟೀಲ, ಶಿವಪುತ್ರಪ್ಪ ಕರಡಿ, ಜಗದೀಶ ಭಂಗಿ, ಮುತ್ತಣ್ಣ ಗಂಗೋಜಿ, ಮಹೇಶ ವಿರುಪಣ್ಣನರ, ಶಂಬುಗೌಡ ಪಾಟೀಲ ಸೇರಿದಂತೆ ನೂರಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link