ಚಿಕ್ಕಪಡಸಲಗಿ ಬ್ಯಾರೇಜಿಗೆ ದಿ.ಸಿದ್ದು ಬಿ. ನ್ಯಾಮಗೌಡ ಹೆಸರು ಇಡಲು ಆದೇಶ

ಬೆಂಗಳೂರು

      ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜಿಗೆ ದಿವಂಗತ ಶಾಸಕ ಸಿದ್ದು ಬಿ. ನ್ಯಾಮಗೌಡ ಅವರ ಹೆಸರು ನಾಮಕರಣ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

       ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಈ ಆದೇಶ ಹೊರಬಿದ್ದಿದೆ. ಚಿಕ್ಕಪಡಸಲಗಿಯಲ್ಲಿ ಸ್ವಂತ ಶ್ರಮದಿಂದ ಬ್ಯಾರೇಜ್ ನಿರ್ಮಿಸಿ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಸಿದ್ದು ನ್ಯಾಮಗೌಡ ಅವರ ಹೆಸರನ್ನು ಬ್ಯಾರೇಜಿಗೆ ಇಡಬೇಕೆಂಬುದು ಆ ಭಾಗದ ರೈತರ ಆಶಯವಾಗಿತ್ತು.

      ಸಿದ್ದು ನ್ಯಾಮಗೌಡರು ಮುತುವರ್ಜಿ ವಹಿಸಿ, ಸಂಪನ್ಮೂಲ ಕ್ರೋಡೀಕರಿಸಿ, ರೈತರ ಜತೆಗೂಡಿ ಶ್ರಮದಾನ ಮಾಡಿದ ಪ್ರಯುಕ್ತ ಚಿಕ್ಕಪಡಸಲಗಿ ಬ್ಯಾರೇಜ್ ಅಸ್ತಿತ್ವಕ್ಕೆ ಬಂದಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link