ತುಮಕೂರು:
ಶಬರಿಮಲೈನ ಪಂಪಾ ಸಮೀಪ ಸನ್ನಿಧಾನಕ್ಕೆ 18 ಕಿ.ಮೀ. ದೂರದ ನೀಲಕಲ್ನಲ್ಲಿ ಶಾಂತಿಯುತವಾಗಿ ಶರಣು ಘೋಷ ಮಾಡುತ್ತಿದ್ದ ಅಯ್ಯಪ್ಪ ಭಕ್ತರ ಮೇಲೆ ಆರಕ್ಷಕರು ವಿನಾಕಾರಣ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿ ಭಕ್ತರನ್ನು ಘಾಸಿಗೊಳಿಸಿರುತ್ತಾರೆ. ಈ ಕ್ರಮವನ್ನು ಖಂಡಿಸಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ತುಮಕೂರು ಜಿಲ್ಲಾ ಘಟಕ ಕಪ್ಪು ಪಟ್ಟಿಯೊಂದಿಗೆ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಟಿ.ಬಿ.ಶೇಖರ್, ರಾಜ್ಯ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಖಜಾಂಚಿ ಜೈಪ್ರಕಾಶ್, ಮಹಿಳಾ ಘಟಕದ ನಾಗರತ್ನ ಪ್ರಸಾದ್, ಜಿಲ್ಲಾ ಘಟಕದ ಕಾರ್ಯದರ್ಶಿ ಸತ್ಯನಾರಾಯಣ್, ಖಜಾಂಚಿ ನರಸಿಂಹಸ್ವಾಮಿ, ಸಂಘಟನಾ ಕಾರ್ಯದರ್ಶಿ ಭೀಮಯ್ಯ, ಯೋಗಂ ಕಾರ್ಯದರ್ಶಿ ವಸಂತ್, ನಿರ್ದೇಶಕರಾದ ಭಾಸ್ಕರಾಚಾರ್, ನಿರ್ಮಲ್ ಕುಮಾರ್, ಪ್ರಮೋದ್, ಪ್ರಸಾದ್ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
