ಸವಣೂರ :
ನಗರದ ತಾಲೂಕ ನ್ಯಾಯಾಲಯ ಆವರಣದಲ್ಲಿ ವಿಕಲಚೇತನರ ದಿನಾಚಾರಣೆ ಹಾಗೂ ಆಸಿಡ್ ದಾಳಿಗೆ ಒಳಗಾದವರಿಗೆ ಇರುವ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು. ನ್ಯಾಯಾಧೀಶರಾದ ಬಾಳಾಸಾಹೇಬ ವಡವಡೆಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನರ ಬಗ್ಗೆ ಎಲ್ಲರೂ ಒಳ್ಳೆಯ ಮನೋಭಾವನೆ ಹೊಂದಿರಬೇಕು. ಅವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
ಇನ್ನೂ ಉತ್ತಮ ಅವಕಾಶವನ್ನು ನೀಡುವಂತಾಗಬೇಕು. ಆಸಿಡ್ ದಾಳಿಗೆ ಒಳಗಾದವರಿಗೆ ಅನೇಕ ಕಾನೂನುಗಳು ಇವೆ. ಅವುಗಳನ್ನು ತಿಳಿದುಕೊಂಡು ಬದುಕನ್ನು ನಡೆಸಬೇಕು ಎಂದರು. ತಾಲೂಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಪ್ರಮೀಳಾ ಎಸ್ ಕೋಟಿ ಮಾತನಾಡಿ ಮಹಿಳೆ ಗರ್ಭಾವಸ್ಥೆಯಲ್ಲಿ ಇರುವಾಗಲೇ ಉತ್ತಮ ವೈಧ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು. ಪೋಲಿಯೋ .ಬಿಸಿಜಿ ಚುಚ್ಚು ಮದ್ದುಗಳನ್ನು ಸರಿಯಾದ ಸಮಯಕ್ಕೆ ಹಾಕಿಸಬೇಕು. ಹತ್ತು ಹಲವು ಚಿಕಿತ್ಸೆಯ ಮೂಲಕ ವಿಕಲಚೇತನ ಆಗುವುದನ್ನು ತಡೆಗಟ್ಟಬಹುದು ಎಂದರು.
ಸಂಘಟಕರಾದ ಗುರುಶಾಂತಯ್ಯ ಕುರ್ಡಿಕೇರಿ, ನ್ಯಾಯವಾದಿಗಳಾದ ಪಿಬಿ ಹಳ್ಳಾಕಾಯಿ ಕಾನೂನು ಸೌಲಭ್ಯಗಳ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಎನ್ಎಸ್ ಪಾಟೀಲ ವಹಿಸಿದ್ದರು. ವಕೀಲರಾದ ಭಿಷ್ಟನಗೌಡ್ರ, ನ್ಯಾಯಲಯದ ವಕೀಲರು ಹಾಗೂ ಕಾರ್ಯವೃಂದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
