ಸದಾನಂದಗೌಡರು ಸ್ವಂತ ಸಾಧನೆ ಮೇಲೆ ಮತಕೇಳಲಿ : ಡಾ.ಜಿ. ಪರಮೇಶ್ವರ

ಬೆಂಗಳೂರು:

      ಸದಾನಂದ ಗೌಡ ಅವರು ತಾವು ಮಾಡಿದ ಸಣ್ಣ ಕಾರ್ಯಕ್ರಮವನ್ನು ತೋರಿಸಿ ಮತಹಾಕಿ ಎಂದು ಪ್ರಚಾರ ಮಾಡಿ. ಮೋದಿಗೆ ಮತ ಹಾಕಿ ಎಂದು ಕೇಳುವ ನಿಮಗೆ ಜನರೇಕೆ ಮತ ಹಾಕಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

      ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೇಗೌಡ ಅವರ ಪರವಾಗಿ ಮತಯಾಚನೆ ಮಾಡಿದರು.

       ರೈತರ ಸಂಕಷ್ಟ ದೂರ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರಕಾರ ಐದು ವರ್ಷದಲ್ಲಿ ಸಣ್ಣ ಯೋಜನೆಯನ್ನೂ ರೈತರಿಗೆ ನೀಡಿಲ್ಲ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲಮನ್ನಾ ಮಾಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಕೆ ಶಿಕ್ಷಣ ನೀಡಿಲ್ಲ. ಇದು ಬಿಜೆಪಿ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

       ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೃಷ್ಣಭೈರೇಗೌಡ ಅವರು ಸಲಹೆ, ಸೂಚನೆ ನೀಡಿದ್ದರು. ಆದರೆ, ಇಂದು ಜಿಎಸ್‌ಟಿ ಬಡವರ ವಿರೋಧಿಯಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡವರು ಅಂಗಡಿಯನ್ನೇ ಮುಚ್ಚುವ ಸ್ಥಿತಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು,

      ಮೋದಿ ಸರಕಾರದಲ್ಲಿ ಬರೋಬ್ಬರಿ ೧೪ ಬಾರಿ ಪೆಟ್ರೋಲ್ ಹಾಗೂ ಡಿಸೆಲ್ ದರ ಹೆಚ್ಚಿಸಲಾಗಿದೆ. ಬ್ಯಾರೆಲ್ ಬೆಲೆ ಕಡಿಮೆ ಇದ್ದಾಗಲೂ ಇಂಧನದ ಬೆಲೆ ಕಡಿಮೆ ಮಾಡಿಲ್ಲ. ಬ್ಯಾರೆಲ್ ಬೆಲೆ ಕಡಿಮೆಯಾಗಿದ್ದರಿಂದ ೨ ಲಕ್ಷ ಕೋಟಿ ರು.ಗೂ ಹೆಚ್ಚು ಉಳಿತಾಯವಾಗಿದೆ,ಆ ಹಣವೆಲ್ಲಾ ಎಲ್ಲಿ ಎಂದು ಪ್ರಶ್ನಿಸಿದರು? ಸದಾನಂದ ಗೌಡರು ಈ ಕ್ಷೇತ್ರದಲ್ಲಿ ತಮ್ಮ ಮುಖವನ್ನೇ ತೋರಿಸಿಲ್ಲ. ಈಗ ಮತ ನೀಡಿ ಎಂದು ಬಂದಿದ್ದಾರೆ. ಅದು ಅವರ ಸಾಧನೆ ಮೇಲಲ್ಲಾ, ಮೋದಿ ಹೆಸರುಹೇಳಿಕೊಂದು ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap