ಹಾನಗಲ್ಲ:
ಕ್ರಾಂತಿಪುರುಷ ಅಣ್ಣ ಬಸವಣ್ಣನವರ ಸಮ ಸಮಾಜ ನಿರ್ಮಾಣಕ್ಕಾಗಿ ಸಹಕಾರ ನೀಡಿದ್ದ ಶರಣದಲ್ಲಿ ಮಡಿವಾಳ ಮಾಚಿದೇವರು ಅಗ್ರಣೀಯರು ಎಂದು ತಹಶೀಲ್ದಾರ್ ಗಂಗಪ್ಪ.ಎಂ ಹೇಳಿದರು.ಶುಕ್ರವಾರ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರ ಸಂದೇಶಗಳ ತಿಳುವಳಿಕೆ ಮತ್ತು ಅಳವಡಿಕೆ ಇಂದಿಗ ಅಗತ್ಯವಾಗಿದೆ ಎಂದರು.
ಮಡಿವಾಳ ಸಮಾಜದ ತಾಲೂಕು ಕಾರ್ಯದರ್ಶಿ ರಾಮಣ್ಣ ಮಡಿವಾಳರ ಮಾತನಾಡಿ, ಮಡಿವಾಳ ಮಾಚಿದೇವರು ವಚನ ಸಾಹಿತ್ಯದ ರಕ್ಷಕರಾಗಿ ಇತಿಹಾಸದಲ್ಲಿ ಗುರುತಿಸಿಕೊಳ್ಳುತ್ತಾರೆ, ಕಲ್ಯಾಣದಲ್ಲಿ ಶರಣರ ವಿರುದ್ಧ ಎದ್ದ ಧಂಗೆ ಸಮಯದಲ್ಲಿ ಹಲವಾರು ಶರಣರನ್ನು ರಕ್ಷಿಸಿದ ಮಾಚಿದೇವರು, ಅಂದು ರಚನೆಗೊಂಡಿದ್ದ ವಚನಗಳನ್ನು ಜೋಪಾನ ಮಾಡಿದ್ದವರು ಎಂದರು.
ಮಡಿವಾಳ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪರಸಪ್ಪ ಮಡಿವಾಳರ, ಉಪಾಧ್ಯಕ್ಷ ಸುರೇಶ ಇನಾಂ ಯಲ್ಲಾಪೂರ, ಸತೀಶ ನಾಗರೊಳ್ಳಿ, ಮಹೇಶ ವಾಸನದ, ಮಂಜು ಮಡಿವಾಳರ, ಉಮೇಶ ಮಡಿವಾಳರ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
