ಬೆಂಗಳೂರು
ನಗರದ ಹೊರವಲಯದ ವಿಶ್ವನಾಥಪುರದ ಕಗ್ಗನಹಳ್ಳಿಯಲ್ಲಿ ನಿನ್ನೆ ರಾತ್ರಿ ಪತಿ, ಪತ್ನಿ ಜಗಳ ಬಿಡಿಸಲು ಹೋದ ಚಿಕ್ಕಪ್ಪ ಕೊಲೆಯಾಗಿ ಹೋಗಿದ್ದಾರೆ.
ಕಗ್ಗನಹಳ್ಳಿಯ ಧರ್ಮಪಾಲ್ (42)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಕೃತ್ಯ ಎಸಗಿದ ಅವರ ಅಣ್ಣನ ಮಗ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ಇತ್ತೀಚೆಗಷ್ಟೇ ವಿವಾಹವಾಗಿದ್ದರು ಕೌಟುಂಬಿಕ ವಿಚಾರಗಳಿಗಾಗಿ ಪತ್ನಿ ಜೊತೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು ನಿನ್ನೆ ರಾತ್ರಿ ಕೂಡ ಇಬ್ಬರೂ ಜಗಳವಾಡುತ್ತಿದ್ದು, ಜಗಳವನ್ನು ಬಿಡಿಸಲು ಅವರ ಚಿಕ್ಕಪ್ಪ ಧರ್ಮಪಾಲ್ ಹೋಗಿದ್ದಾರೆ. ಈ ವೇಳೆ ರಾಘವೇಂದ್ರ, ಧರ್ಮಪಾಲ್ ಅವರ ಕಪಾಳಕ್ಕೆ ಬಲವಾಗಿ ಹೊಡೆದಿದ್ದು, ಕುಸಿದು ಬಿದ್ದ ಧರ್ಮಪಾಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿರುವ ವಿಶ್ವನಾಥಪುರದ ಪೊಲೀಸರು, ರಾಘವೇಂದ್ರನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/crime-scene.gif)