ಯಾದಗಿರಿ:
ಮಗುವಿನ ಚಿಕ್ಕಪ್ಪ ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿ ಮೂರು ತಿಂಗಳ ಹೆಣ್ಣು ಮಗುವನ್ನು ಬಾವಿಗೆ ಎಸೆದು ಕೊಂದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಬಳಿಕ ಮನೆಯವರು ಮಗುವಿನ ಹುಡುಕಾಟ ಆರಂಭಿಸಿದಾಗ ಆರೋಪಿ ಯಲ್ಲಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಹಸುಗೂಸು ಬಾವಿಯಲ್ಲಿ ಬಿದ್ದಿರಬಹುದು ನೋಡಿ ಎಂದು ಬಾಲಕಿಯೇ ಮೊದಲು ಹೇಳಿದ್ದಳು. ಅಲ್ಲದೇ, ಬಾಲಕಿ ಮಗುವನ್ನು ಎತ್ತಿಕೊಂಡು ಹೋಗಿರುವುದನ್ನು ನೋಡಿದವರು ಪೋಲಿಸರಿಗೆ ತಿಳಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಯಾದಗಿರಿ ನಗರ ಪೊಲೀಸರು ಪ್ರಕರಣವನ್ನು ಭೇದಿಸಿ ಅಪ್ರಾಪ್ತ ಬಾಲಕಿಯನ್ನು ವಿಚಾರಣೆಗೊಳಪಡಿಸಿ ವಶಕ್ಕೆ ಪಡೆದಿದ್ದಾರೆ. ಮಗುವಿನ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದ ಕಾರಣ ಮತ್ತು ಅವನು ಅವಳನ್ನು ತಿರಸ್ಕರಿಸಿದ್ದರಿಂದ ಅಪರಾಧ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಯಲ್ಲಪ್ಪನ ಮನೆಯ ಪಕ್ಕದಲ್ಲೆ ವಾಸಿಸುತ್ತಿದ್ದಳು.
