ತುಮಕೂರು : ಮೊಬೈಲ್ ಫೀವರ್ ಕ್ಲಿನಿಕ್ ಗೆ ಚಾಲನೆ

ತುಮಕೂರು

     ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ತುಮಕೂರು ಕೆಸ್ಸಾರ್ಟಿಸಿ ನಿರ್ಮಿಸಿರುವ ಮೊಬೈಲ್ ಫೀವರ್ ಕ್ಲಿನಿಕ್ ಬಸ್‍ಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ಚಾಲನೆ ನೀಡಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಕರಾರಸಾ ನಿಗಮ ವತಿಯಿಂದ ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳಲು ಬಸ್ಸನ್ನು ಮಾರ್ಪಾಡು ಮಾಡಿ, ಮೋಬೈಲ್ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಿಂದ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಅನವಶ್ಯಕ ಓಡಾಟವನ್ನು ತಪ್ಪಿಸಬಹುದು. ಅವಶ್ಯಕತೆ ಇರುವ ಕಡೆ ಮೊಬೈಲ್ ಫೀವರ್ ಕ್ಲಿನಿಕ್ ಬಸ್‍ನಲ್ಲಿಯೇ ಗಂಟಲು ದ್ರವ ಮಾದರಿಯನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

      ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕಡೆ ರ್ಯಾಂಡಮ್ ಆಗಿ ಪರೀಕ್ಷೆ ಮಾಡಲು ಜನರ ಗಂಟಲು ದ್ರವ ಮಾದರಿನ್ನು ಪಡೆಯಬಹುದು. ಅಲ್ಲದೇ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಲು ಸಹ ಇದು ಉಪಯೋಗವಾಗುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆದು ಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

      ನಂತರ ಡಿ.ಎಚ್.ಓ ಡಾ|| ನಾಗೇಂದ್ರಪ್ಪ ಮಾತನಾಡಿ, ಜನಸಂದಣಿ ಹೆಚ್ಚಿರುವ ಸ್ಥಳಕ್ಕೆ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ತೆಗೆದುಕೊಂಡು ಹೋಗಿ ಅವಶ್ಯಕವಿರುವವರ ಗಂಟಲು ದ್ರಾವವನ್ನು ಪರೀಕ್ಷೆ ಮಾಡಲು ವ್ಯಸ್ಥೆಯನ್ನು ಮಾಡಿದ್ದು, ಆರೋಗ್ಯ ಇಲಾಖೆ ವತಿಯಿಂದ ಈಗಾಗಲೇ ಬಸ್ ಕಾರ್ಯನಿರ್ವಹಿಸುತ್ತಿತ್ತು. ಅದರ ಜೊತೆಗೆ ಕೆಎಸ್ಸಾರ್ಟಿಸಿ ವತಿಯಿಂದ ಒಂದು ಬಸ್ ಕಾರ್ಯ ನಿರ್ವಹಿಸುತ್ತದೆ ಎಂದರು.

      ಸದರಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್‍ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಕೆಎ-06 ಎಫ್-662 ವಾಹನವನ್ನು ಉಪಯೋಗಿಸಿಕೊಳ್ಳಲಾಗಿದ್ದು, ಈ ಬಸ್ಸಿನಲ್ಲಿ ಒಟ್ಟು 12 ಜನ ನುರಿತ ತಾಂತ್ರಿಕ ಸಿಬ್ಬಂದಿಗಳಿಂದ 05 ದಿನಗಳಲ್ಲಿ 50 ಸಾವಿರ ರೂ. ವೆಚ್ಚದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ನಿರ್ಮಿಸಲಾಗಿದೆ ಎಂದು ಕೆಸ್ಸಾರ್ಟಿಸಿ ಡಿಸಿ ಗಜೇಂದ್ರಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಮೊಬೈಲ್ ಫೀವರ್ ಕ್ಲಿನಿಕ್ ಬಸ್‍ನ ಸೌಲಭ್ಯಗಳು:-

      ವೈದ್ಯರ ಕ್ಯಾಬಿನ್, ನರ್ಸ ಕ್ಯಾಬಿನ್, ರೋಗಿಗಳ ತಪಾಸಣೆಗಾಗಿ ಪ್ರತ್ಯೇಕ ಡಯಾಗ್ನೋಸಿಂಗ್ ಘಟಕ, ಸ್ವ್ಯಾಬ್ ಸ್ಯಾಂಪಲ್ ಕಲೇಕ್ಷನ್‍ಗಾಗಿ ಪ್ರತ್ಯೇಕ ಕ್ಯಾಬಿನ್, ಸ್ಯಾನಿಟೈಜರ್ ಯುನಿಟ್, ರೋಗಿಗಳಿಗಾಗಿ ಆಸನಗಳು, ವಾಶ್ ಬೇಸಿನ್, ಪ್ಯಾನ್‍ಗಳು, ಬೆಳಕಿನ ವ್ಯವಸ್ಥೆ, ವಾಹನದ ಹೊರ ಕವಚದ ಮೇಲೆ ಕೋವಿಡ್-19 ಸಂಬಂಧಿಸಿದಂತೆ ಮಾಹಿತಿ ಹಾಗೂ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಪ್ಲೆಕ್ ಅಳವಡಿಸಲಾಗಿರುತ್ತದೆ.

ಮೊಬೈಲ್ ಫೀವರ್ ಕ್ಲಿನಿಕ್ ಬಸ್‍ನ ಉಪಯೋಗ:-

    ವಾಹನವನ್ನು ಯಾವುದೇ ಸ್ಥಳಕ್ಕೆ/ಊರುಗಳಿಗೆ ಕೊಂಡೊಯ್ಯವುದು ರೋಗಿಗಳನ್ನು ತಪಾಸಣೆ ಹಾಗೂ ಸ್ವ್ಯಾಬ್ ಸ್ಯಾಂಪಲ್ ಕಲೇಕ್ಷನ್ ಮಾಡಬಹುದಾಗಿರುತ್ತದೆ. ಹಳ್ಳಿಗಳಿಂದ ಮತ್ತು ಇತರೆ ಸ್ಥಳಗಳಿಂದ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಅನವಶ್ಯಕವಾಗಿ ಓಡಾಟವನ್ನು ತಪ್ಪಿಸಬಹುದಾಗಿರುತ್ತದೆ. ವಲಸೆ ಬಂದವರನ್ನು ಗುಂಪು ಸೇರದಂತೆ ಅವರಿರುವ ಸ್ಥಳದಲ್ಲಿ ಪರೀಕ್ಷೆ ಮಾಡಬಹುದಾಗಿರುತ್ತದೆ. ಬಸ್‍ನಿಲ್ದಾಣ/ರೈಲ್ವೆ ನಿಲ್ದಾಣಗಳಲ್ಲಿ ಶಂಕಿತ ಸಾರ್ವಜನಿಕರ ತಪಾಸಣೆ ಮಾಡಲು ಅನುಕೂಲವಾಗುತ್ತದೆ.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ವೀರಭದ್ರಯ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap