ಶಾಸಕರ ವಿರುದ್ಧ ಸಂಸದರ ಕಿಡಿ..!

ಮಧುಗಿರಿ :

    ಮಧುಗಿರಿಯಲ್ಲಿ ಕುಡಿಯುವುದಕ್ಕೆ ನೀರಿಲ್ಲದೆ ಜನರು ಒದ್ದಾಡುತ್ತಿದ್ದರೂ ಸಹ ಶಾಸಕ ಎಂ.ವಿ.ವೀರಭದ್ರಯ್ಯ ಬಳ್ಳಾಪುರದ ಹೇಮಾವತಿ ಪಂಪ್‍ಹೌಸ್ ನಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದು ಶಾಸಕರ ವಿರುದ್ದ ಸಂಸದ ಜಿ.ಎಸ್.ಬಸವರಾಜು ಕಿಡಿಕಾರಿದರು.

    ಬೆಳ್ಳಾವಿಯ ಬಳ್ಳಾಪುರ ಹೇಮಾವತಿ ಪಂಪ್ ಹೌಸ್‍ಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಹೇಮಾವತಿ ಪಂಪ್‍ಹೌಸ್ ನಲ್ಲಿ ಮಧುಗಿರಿಗೆ ಸೇರಿದ ವಿದ್ಯುತ್ ಪರಿವರ್ತಕ ತಾಮ್ರದ ತಂತಿಗಳು ಮತ್ತು ಬ್ಯಾಟರಿಗಳು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಇದರಿಂದ ಮಧುಗಿರಿಗೆ ಹೇಮಾವತಿ ನೀರು ಹರಿಯಲು ತಡವಾಗುತ್ತಿದೆ. ಹೇಮಾವತಿ ಪಂಪ್ ಹೌಸ್ ನಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಬ್ಯಾಟರಿಗಳನ್ನು ಸೋಮವಾರ ರಾತ್ರಿಯೊಳಗೆ ಜೋಡಿಸಿ ನೀರು ಹರಿಸುವಂತೆ ಸಂಭಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

     ಮಧುಗಿರಿ ತಾಲ್ಲೂಕು ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ನೀರು ಗಂಟಿಯಾಗಿ ಕೆಲಸ ಮಾಡಲು ತಾನು ಸಿದ್ದವಿರುವುದಾಗಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಮಂಗಳವಾರ ಸಂಜೆಯೊಳಗೆ ಮಧುಗಿರಿ ತಾಲ್ಲೂಕು ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯುತ್ತದೆ ಎಂದರು.

      ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ , ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಎನ್.ಗಂಗಣ್ಣ , ಪುರಸಭೆ ಸದಸ್ಯರಾದ ಎಂ.ವಿ.ಗೋವಿಂದರಾಜು , ತಿಮ್ಮರಾಯಪ್ಪ, ಲಾಲಾ ಪೇಟೆ ಮಂಜುನಾಥ್ , ನಟರಾಜು , ಮುಖಂಡರಾದ ಎಂ.ಎಸ್.ಶಂಕರನಾರಾಯಣ , ಆನಂದ್ , ಉಮೇಶ್ , ಸಾಧಿಕ್ , ಎಂ.ಜಿ.ರಾಮು ,ಎಸ್.ಬಿ.ಟಿ.ರಾಮು, ಲೋಕೇಶ್ , ರಘು , ಬಸವರಾಜು ಪುರಸಭೆಯ ಮುಖ್ಯಾಧಿಕಾರಿ ಡಿ.ಲೋಹಿತ್, ಇಂಜಿನಿಯರ್ ಶ್ರೀರಂಗಯ್ಯ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap