ಎಂ.ಪಿ.ರವೀಂದ್ರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನ

ಹೂವಿನಹಡಗಲಿ :

        ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶರ ಏಕೈಕ ಪುತ್ರ ಹಾಗೂ ಹರಪನಹಳ್ಳಿಯ ಮಾಜಿ ಶಾಸಕ ಎಂ.ಪಿ.ರವೀಂದ್ರರವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.

         03-11-2018ರಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಎಂ.ಪಿ.ರವೀಂದ್ರರವರ ಪಾರ್ಥಿವ ಶರೀರವನ್ನು 04-11-2018ರಂದು ಸ್ವ ಕ್ಷೇತ್ರವಾದ ಹೂವಿನಹಡಗಲಿಗೆ ತರಲಾಗಿತ್ತು. ಅವರ ತೋಟದ ನಿವಾಸದಲ್ಲಿ ಸ್ವಲ್ಪಕಾಲ ಪಾರ್ಥಿವ ಶರೀರವನ್ನು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ 11 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.

          ಎಂ.ಪಿ.ರವೀಂದ್ರರವರು ಹೂವಿನಹಡಗಲಿ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು ಹೊಂದಿದ್ದರು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಜನಸಾಗರ ಅವರ ಅಂತಿಮ ದರ್ಶನವನ್ನು ಪಡೆಯಲು ಹರಿದು ಬಂದಿತ್ತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಅವರ ಜಮೀನಿನಲ್ಲಿ ದಿವಂಗತ ಎಂ.ಪಿ.ಪ್ರಕಾಶರವರ ಸಮಾಧಿಯ ಪಕ್ಕದಲ್ಲಿ ಎಂ.ಪಿ.ರವೀಂದ್ರರವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯಿತ ಸಮಾಜದ ವಿಧಿ ವಿಧಾನಗಳ ಪ್ರಕಾರ ನೆರವೇರಿಸಲಾಯಿತು.

         ಮಾತೋಶ್ರೀ ಎಂ.ಪಿ.ರುದ್ರಾಂಭ ಸೇರಿದಂತೆ ಅಂತಿಮ ಸಂಸ್ಕಾರದಲ್ಲಿ ಕುಟುಂಬ ವರ್ಗ, ವಿವಿಧ ಮಠಾಧೀಶರು, ವಿಧಾನಸಭಾ ಸಭಾಪತಿ ರಮೇಶಕುಮಾರ್, ಶಾಸಕರುಗಳಾದ ಪಿ.ಟಿ.ಪರಮೇಶ್ವರನಾಯ್ಕ, ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡುರಾವ್, ವಿ.ಎಸ್.ಉಗ್ರಪ್ಪ, ಶಾಸಕರಾದ ಆನಂದಸಿಂಗ್, ಭೀಮಾನಾಯ್ಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಈ.ತುಕಾರಾಂ, ಹುಣ್ಸೂರು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ, ವಿಜಯಾನಂದ ಕಾಶಪ್ಪನವರ್, ಅನಿಲ್‍ಲಾಡ್, ಹೆಚ್ . ಆರ್ .ಗವಿಯಪ್ಪ, ರುದ್ರಪ್ಪ ಲಮಾಣಿ, ಎಸ್.ಎಸ್.ಪಾಟೀಲ್, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಡಿ.ಆರ್.ಪಾಟೀಲ್ , ಚತ್ರನಟ ಶ್ರೀನಗರ ಕಿಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಸೇರಿದಂತೆ ಅಪಾರ ಅಭಿಮಾನಿ ಬಳಗದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link