ತಿಪಟೂರು :
ನಗರಸಭೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕನಿಗೆ ಕೊರೋನಾ ಸೋಂಕು ಶುಕ್ರ್ರವಾರ ದೃಢವಾಗಿದ್ದು, ಪೌರಕಾರ್ಮಿಕ ವಾಸಿಸುತ್ತಿದ್ದ ನಗರದ ವಿವೇಕಾನಂದ ನಗರದ 6ನೆ ಕ್ರಾಸ್ ಅನ್ನು ಸೀಲ್ಡೌನ್ ಮಾಡಲಾಗಿದೆ. ಶುಕ್ರವಾರ ರಾತ್ರಿಯೆ ನಗರಸಭಾ ಕಚೇರಿಗೆ ಸೋಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ.
ನಗರಸಭೆಯ ಪೌರಕಾರ್ಮಿಕನು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲದಿದ್ದರೂ, ಕೊರೋನಾ ಸೋಂಕು ದೃಢಪಟ್ಟಿದ್ದು, ಆತಂಕವನ್ನುಂಟು ಮಾಡಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಿದಾಗ ಕೊರೋನಾ ಸೋಂಕು ದೃಢವಾಗಿದೆ. ಇತರ ಪೌರಕಾರ್ಮಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಸಂದರ್ಭದಲ್ಲಿ ಪೌರಾಕಾರ್ಮಿಕರಿಗೆ ನಗರಸಭೆ ಪೌರಾಯುಕ್ತ ಹಾಗೂ ಡಿ.ವೈ.ಎಸ್ಪಿ ಪೌರಕಾರ್ಮಿಕರನ್ನು ಕುರಿತು, ನೀವೆಲ್ಲರೂ ಕೊರೋನಾ ವಾರಿಯರ್ರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಜನಸೇವೆಯೆ ಜನಾರ್ಧನನ ಸೇವೆಯಂತೆ ಕಾರ್ಯೋನ್ಮುಖವಾಗಿರುವ ನಿಮಗೆ ಏನೂ ಆಗುವುದಿಲ್ಲ. ಧೈರ್ಯವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸಿ ಎಂದು ಆತ್ಮ ವಿಶ್ವಾಸವನ್ನು ತುಂಬಿದರು.
ನಗರದ ಬ್ಯಾಂಕ್, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮಾಯ : ಕೊರೊನಾ ಬಂದರೇನು ನಮಗೂ ಅದಕ್ಕೂ ಸಂಬಂಧ ವಿಲ್ಲವೆಂಬಂತೆ ನಮ್ಮ ನಾಗರಿಕರು ವರ್ತಿಸುತ್ತಿದ್ದು, ಎಲ್ಲಾ ಬ್ಯಾಂಕ್, ಮಾರುಕಟ್ಟೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಸ್ವೇಚ್ಛೆಯಾಗಿ ಮಾಸ್ಕ್ ಮಾತ್ರ ಧರಿಸಿ, ಯಾವುದೇ ಸಾಮಾಜಕ ಅಂತರವನ್ನು ಕಾಯ್ದು ಕೊಳ್ಳದೆ ಓಡಾಡುತ್ತಿರುವುದು ಹೆಚ್ಚಾಗಿರುವ ಈ ಸಂದÀರ್ಭದಲ್ಲಿ ನಾಗರಿಕರು ಎಚ್ಚೆತ್ತುಕೊಳ್ಳದೆ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮತ್ತೆ ಮುನ್ನೆಲೆಗೆ ಬಂದ ಗುಟ್ಕಾ, ಸಿಗರೇಟ್ :
ಕೊರೋನಾ ಹರಡುತ್ತದೆ ಎಂದು ದೇಶದಲ್ಲೆ ಸಿಗರೇಟ್ ಮತ್ತು ಗುಟ್ಕಾ ಮುಂತಾದ ನೇರವಾಗಿ ಬಾಯಿಗೆ ಸಂಪರ್ಕವನ್ನು ಉಂಟುಮಾಡುವ ವಸ್ತುಗಳನ್ನು ಬಳಸುವ ಹಾಗಿಲ್ಲ ಮತ್ತು ಮಾರುವ ಹಾಗಿಲ್ಲವೆಂದು ತಾಲ್ಲೂಕು ಆಡಳಿತ ಕೆಲವು ಸಿಗರೇಟ್ ಮತ್ತು ಗುಟ್ಕಾಗಳನ್ನು ಮಾರುವವರಿಗೆ ದಂಡವನ್ನು ಹಾಕುತ್ತಿತ್ತು. ಇದು ಬಂದ ಮೇಲೆ ಕೆಲವರು ಕದ್ದು ಮುಚ್ಚಿ ಮಾರಿ ಸಾಕಷ್ಟು ಹಣವನ್ನು ಮಾಡಿಕೊಂಡಿದ್ದಾರೆ. ಆದರೆ ತಾಲ್ಲೂಕು ಆಡಳಿತ ಸಿಗರೇಟ್ ಮತ್ತು ಗುಟ್ಕಾ ಮೇಲಿನ ನಿರ್ಬಂದದ ಆದೇಶವನ್ನು ಯಾವಾಗ ಹಿಂತೆಗೆದುಕೊಂಡಿತೂ ಇಲ್ಲ ನಮ್ಮ ತಾಲ್ಲೂಕಿಗೆ, ನಗರಕ್ಕೆ ಕೊರೊನಾ ಬಂರುವುದಿಲ್ಲವೆಂದು ತಿಳಿದು ಮತ್ತೆ ಅದರ ಉಸಾಬರಿಗೆ ಹೋಲಿಲ್ಲ ಇದರಿಂದ ಎಲ್ಲಾ ಅಂಗಡಿಗಳಲ್ಲು ಮಾರುತ್ತಿದ್ದು ಗುಟ್ಕಾ ತಿಂದವರು ಎಲ್ಲಿ ಬೇಕೋ ಅಲ್ಲಿ ಉಗಿಯುತ್ತ ರಾಜಾರೋಷವಾಗಿ ಓಡಾಡುತ್ತದ್ದು ಯಾರು ಕೇಳುತ್ತಿಲ್ಲ.
ನಾಗರೀಕರು ಈಗಲಾದರು ಸರ್ಕಾರಿ ನಿಯಮಗಳನ್ನು ಪಾಲಿಸಿ ಅತ್ಯವಶ್ಯಕ ಕೆಲಸವಿದ್ದರೆ ಮಾತ್ರ ಹೊರಗೆ ಬಂದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಎಚ್ಚರಿಕೆಯಲ್ಲಿ ಇರದಿದ್ದರೆ ಅಪಾವಿದ್ದು ತಮ್ಮ ಜೀವ, ತಮ್ಮ ಕುಟುಂಬ, ಹಾಗೂ ನಮ್ಮ ಆರೋಗ್ಯವೆಂದು ತಿಳಿದರೆ ಸಮಾಜವು ಸುರಕ್ಷಿತವಾಗಿ ಇರುವುದರಲ್ಲಿ ಅನುಮಾನವೇ ಇಲ್ಲ, ಸುಕ್ಷತೆ ನಿಮ್ಮ ಆಯ್ಕೆಯಾಗಿರಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
