ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ಭಾವಮೈದುನನಿಂದ ತನ್ನ ಭಾವನ ಕೊಲೆ

ಬೆಂಗಳೂರು

       ತನ್ನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರಿಂದ ಆಕ್ರೋಶಗೊಂಡ ಭಾಮೈದ ತನ್ನ ಭಾವನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುರ್ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

        ಕೊಲೆಯಾದವರನ್ನು ನೆಲಮಂಗಲದ ದೇವಾಂಗ ಬೀದಿಯ ಗಣೇಶ್(40)ಎಂದು ಗುರುತಿಸಲಾಗಿದೆ,ಗಣೇಶ್ ಅವರನ್ನು ಕೊಲೆಗೈದು ಪರಾರಿಯಾಗಿರುವ ಭಾಮೈದ ಆನಂದ್ ಭಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

        ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ ಗಣೇಶ್ ಮನೆಮಂದಿಯೊಂದಿಗೆ ಜಗಳ ತೆಗೆದು ಗಲಾಟೆ ಮಾಡುತ್ತಾ ಅಕ್ಕಪಕ್ಕದವರಿಗೂ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತು ಆತನಿಗೆ ಬುಧ್ದೀ ಕಲಿಸಲು ಕೊಲೆಯಾದ ಗಣೇಶ್ ನೆಲಮಂಗಲ ಪೆಲೀಸ್ ಠಾಣೆಗೆ ಆನಂದ್ ವಿರುದ್ಧ ದೂರು ನೀಡಿದ್ದರು.ಪೊಲೀಸರು ಠಾಣೆಗೆ ಕರೆಸಿ ಬುದ್ದಿ ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು ಇದರಿಂದ ಕೋಪಗೊಂಡ ಆನಂದ್ ರಾತ್ರಿ ಕಂಠ ಪೂರ್ತಿ ಕುಡಿದು ಬಂದು ಗಣೇಶ್ ಜೊತೆ ಜಗಳವಾಡಿದ್ದಾನೆ.

         ಜಗಳ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಆನಂದ್ ಗಣೇಶ್‍ಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.ಕೊಲೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ನೆಲಮಂಗಲ ಪಟ್ಟಣ ಪೆಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಆನಂದ್‍ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link