ಹಿರಿಯೂರು:
ನಗರದ ಜಯಕರ್ನಾಟಕ ಸಂಘಟನೆ ವತಿಯಿಂದ ಇಂದು ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಎನ್.ಮುತ್ತಪ್ಪರೈ ರವರ ಜನ್ಮ ದಿನಾಚರಣೆ ಅಂಗವಾಗಿ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ಯಲ್ಲದಕೆರೆ ಇವರು ಮಾತನಾಡಿ ನಮ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀಯುತ ಮುತ್ತಪ್ಪರೈ ರವರು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಸಂಘಟನೆಯ ವತಿಯಿಂದ ನಗರದಲ್ಲೂ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದರಲ್ಲದೆ, ಶ್ರೀಯುತ ಮುತ್ತಪ್ಪರೈ ರವರಿಗೆ ದೇವರು ಆಯುರಾ ರೋಗ್ಯವನ್ನು ನೀಡಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ್, ಸಂಘಟನೆಯ ಕಾರ್ಯಾಧ್ಯಕ್ಷರಾದ ಹುಚ್ಚವ್ವನಹಳ್ಳಿ ಪಾಪಣ್ಣ, ನಗರಾಧ್ಯಕ್ಷರಾದ ಟಿ.ರಾಜು, ಉಪಾಧ್ಯಕ್ಷರಾದ ಮಂಜುನಾಥ್ ಎಂ.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ಕೊಟ್ಟಿಗೆ, ಕಾರ್ಯದರ್ಶಿಯಾದ ಬಿ.ಪಿ.ಮೃತ್ಯುಂಜಯ, ಯುವಘಟಕ ತಾಲ್ಲೂಕು ಅಧ್ಯಕ್ಷರಾದ ಬಾನುಪ್ರಕಾಶ್, ಸರವಣ, ತರುಣ್, ಆಲೋಶಿಸತೀಶ್, ಮಂಜುನಾಥ್, ಹಾಗೂ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
