ಮೈತ್ರಿ ಗೆಲುವಿನ ರೂಪರೇಷೆಗಾಗಿ ಪ್ರವಾಸ

ದಾವಣಗೆರೆ:

        ಮೈತ್ರಿ ಧರ್ಮದಂತೆ ದಾವಣಗೆರೆ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದ್ದು, ವರಿಷ್ಠರ ಸೂಚನೆಯ ಮೇರೆಗೆ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಗೆಲುವಿಗಾಗಿ ರೂಪರೇಷೆಯ ಬಗ್ಗೆ ಸಮಾಲೋಚಿಸಲು ಜೆಡಿಎಸ್ ಮುಖಂಡರ ತಂಡವು ಶನಿವಾರ ಹರಪನಹಳ್ಳಿಗೆ ಭೇಟಿ ನೀಡಿತ್ತು.

        ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ದಾವಣಗೆರೆ ಜಿಲ್ಲೆಯ ಜನತಾದಳದ ಮುಖಂಡರುಗಳು ತಾಲ್ಲೂಕು ಅಧ್ಯಕ್ಷ ಚನ್ನಬಸವನಗೌಡ್ರು ಇವರ ನಿವಾಸಕ್ಕೆ ಹಾಗೂ ತಾಲ್ಲೂಕಿನ ವಿವಿಧ ಮುಖಂಡರು, ಕಾರ್ಯಕರ್ತನ್ನು ಭೇಟಿಯಾಗಿ ಚುನಾವಣಾ ಪೂರ್ವಭಾವಿಯಾಗಿ ಮೈತ್ರಿ ಅಭ್ಯರ್ಥಿಯ ಗೆಲುವಿನ ರೂಪುರೇಷೆಗಾಗಿ ಸಮಾಲೋಚನೆ ನಡೆಸಿದರು.

       ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ದಾವಣಗೆರೆ ನಗರದ ಹಿರಿಯ ವಕೀಲ, ಲೋಕಸಭಾ ಕ್ಷೇತ್ರದ ಹಿಂದಿನ ಟಿಕೆಟ್ ಆಕಾಂಕ್ಷಿ ಅನೀಸ್‍ಪಾಷಾ, ರಾಜ್ಯ ವಕ್ತಾರ್ ಜಸ್ಟಿನ್ ಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಗುಡ್ಡಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಅಧ್ಯಕ್ಷ ಸಂಗನಗೌಡ, ಜಿಲ್ಲಾ ಉಪಾಧ್ಯಕ್ಷ ಗೋಣಿವಾಡ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ದಾದಾಪೀರ್, ಮಲ್ಲಾಪುರದ ದೇವರಾಜ್, ವಾಜಿದ್, ಜಾನ್ ಮತ್ತು ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link