ಹಗರಿಬೊಮ್ಮನಹಳ್ಳಿ
ತಾಲೂಕು ಕೃಷಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಎಚ್.ನಾಗರಾಜ್ ಅವರಿಗೆ ಮಹಾತ್ಮಗಾಂದಿ ಉದ್ಯೋಗ ಖಾತರಿ ಯೋಜನೆಯ ಉತ್ತಮ ಪ್ರಗತಿ ಸಾಧನೆಗೆ ನರೇಗಾ ಪ್ರಶಸ್ತಿಯನ್ನು ನಿಡಿ ಜಿ.ಪಂ.ಯಿಂದ ಗೌರವಿಸಲಾಗಿದೆ.
ನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ಬರಪರಿಸ್ಥಿತಿ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದು, ಈ ಯೋಜನೆಯಲ್ಲಿ ತೊಡಗಿಕೊಳ್ಳುವಲ್ಲಿ ಕೃಷಿ ಕಾರ್ಮಿಕರನ್ನು ವಲಸೆ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಇಲಾಖೆಯಿಂದ ಕೈಗೊಳ್ಳುವ
ಕಾರ್ಯಕ್ರಮಗಳಲ್ಲಿ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಹೆಚ್ಚು ಮಾನವ ದಿನಗಳ ಬಳಕೆ ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ತ್ವರಿತಗತಿಯಲ್ಲಿ ಮತ್ತು ನಿಗಧಿತ ಸಮಯದಲ್ಲಿ ಕಾರ್ಯನಿರ್ವಹಣೆಯಲ್ಲಿ ಯಶಸ್ವಿಯಾದ ಅಧಿಕಾರಿಗೆ ಜಿ.ಪಂ.ಯಿಂದ ಇತ್ತೀಚಿಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಕ ಅಧಿಕಾರಿ ಮತ್ತು ಇಲಾಖೆಯ ಇತರ ಹಿರಿಯ ಅಧಿಕಾರಿಗಳಿಂದ ನಾಗರಾಜ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಇಲಾಖೆಯ ಸಿಬ್ಬಂದಿಕೂಡ ಪ್ರಶಸ್ತಿಗೆ ಬಾಜೀನರಾದ ನಾಗರಾಜ್ ಅವರನ್ನು ಹೃತ್ಪೂರ್ವಕ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಇಒ ಮಲ್ಲಾನಾಯ್ಕ್, ನರೇಗಾ ಯೋಜನಾಧಿಕಾರಿ ವಿಶ್ವನಾಥ, ಕೃಷಿ ಇಲಾಖೆಯ ಬೋಜಾನಾಯ್ಕ್ ಬಸವರಾಜ್, ಗಣೇಶ್, ನಾಗರಾಜ್, ಧನಂಜಯ, ಆದಿ, ಹನುಮಂತಪ್ಪ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
