ತಿಪಟೂರು
ಇನ್ನು ಚುನಾವಣೆ ಪ್ರಕಟಣೆಯು ಹೊರಡುವ ಮೊದಲೇ ತಾವು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವ ಮಾಜಿ ಸದಸ್ಯರುಗಳು, ನಾವು ಹೊಸದಾಗಿ ಏನನ್ನಾದರೂ ಮಾಡುತ್ತೇವೆ ಎನ್ನುವ ತರುಣರು ನಗರ ಸಭೆಯ ಸತ್ವಪರೀಕ್ಷೆಗೆ ತಯಾರಾಗುತ್ತಿದ್ದಾರೆ.
ಶುಕ್ರವಾರ ನಗರದ ಕಲ್ಪತರು ಗ್ರಾಂಡ್ ಹೋಟೆಲ್ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ನಗರಸಭೆಯ ಸದಸ್ಯ ಅಮಾನ್ ಸಾಬ್, ನಾನು ನಗರಸಭೆಗೆ ಆಯ್ಕೆಯಾಗಿ ನಮ್ಮ 21ನೇ ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅವುಗಳೇ ನನ್ನ ಗೆಲುವಿಗೆ ಹಾದಿಯಾಗಲಿವೆ ಎಂದ ಅವರು, ಈ ಬಾರಿಯ ಚುನಾವಣೆ ರಂಜಾನ್ ಸಂದರ್ಭದಲ್ಲಿ ಬರುತ್ತಿರುವ ನಾನು ಪ್ರತಿ ಭಾರಿಯಂತೆ ಈ ಬಾರಿಯು ನಾನು ಮೆಕ್ಕಾ ಮದಿನಾಕ್ಕೆ ತೆರಳುತ್ತೇನೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ನನ್ನ ವಿರುದ್ಧ ಅಪಪ್ರಚಾರಮಾಡುತ್ತಿದ್ದು ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷದಿಂದ ಈ ಬಾರಿ 25 ನೇ ವಾರ್ಡ್ಗೆ ಸ್ಪರ್ಧಿಸಿ ಗೆಲ್ಲುವುದು ಖಚಿತವೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸಲ್ಮಾನ ಮುಖಂಡರಾದ ಸೈಯದ್ ಉಸ್ಮಾನ್, ಮೊಹಮದ್ ರೆಹಮತ್ಉಲ್ಲಾ, ಮೊಹಮದ್, ಹಿದಾಯುತ್ ಉಲ್ಲಾ, ಸೈಯದ್ ಹಫೀಸ್, ಷೇಕ್ ಹಿದಾಯುತ್ ಉಲ್ಲಾ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
