ಹಾವೇರಿ :
ರಾಜ್ಯದಲ್ಲಿನ ವಿಕಲಚೇತನರ ನಿಖರ ಗಣತಿಯನ್ನು ಪಾರದರ್ಶಕವಾಗಿ ಮುಖ್ಯಮಂತ್ರಿಗಳು ಮಾಡಿಸಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಮುಖಂಡ ಮಂಜುನಾಥ ಆರ್ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನೂತನ ವಿಕಲಚೇತನರ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನರ ನೆರವಿಗೆ ಧಾವಿಸಬೇಕಾದರೆ ಅಂಕಿ ಸಂಖ್ಯೆಗಳು ಬಹಳ ಮುಖ್ಯ.
ನ್ಯಾಯಪೂರಕ ವಿಕಲಚೇತನರಿಗೆ ಸರ್ಕಾರ ಸೌಲಭ್ಯ ದೊರಕುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಸರಿಯಾದ ಪಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತಾಗಬೇಕು. ಸರ್ಕಾರ ನಮ್ಮ ಬಗ್ಗೆ ಅನುಕಂಪಕ್ಕಿಂತ ಸೌಲಭ್ಯ ನೀಡಿದರೆ ಸ್ವಾವಲಂಭನೆ ಬದುಕು ಕಟ್ಟಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿಯವರು ಮುಂದಾಗಬೇಕು. ಅಲ್ಲದೇ ನಮ್ಮ ಹಕ್ಕು ಹಾಗೂ ಸೌಲಭ್ಯ ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಒಕ್ಕೂಟವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸುತ್ತಿದ್ದು, ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಜಿಲ್ಲಾಧ್ಯಕ್ಷರಾದ ಬಿಸ್ಮಿಲ್ಲಾ ಮುಲ್ಲಾ,ಗೌರವಾಧ್ಯಕ್ಷರಾಗಿ ಕುಶುಮಾ.ಉಪಾಧ್ಯಕ್ಷರಾಗಿ ಮೈಲಾರಪ್ಪ ಮೆಗಲಮನಿ. ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಳಸೂರ.ಮಂಜುನಾಥ ಮಹಾಂತಿನಮಠ, ಮಲ್ಲಿಕಾಜುನ ಯರಗುಪ್ಪ ಸೇರಿದಂತೆ ಅನೇಕರು ಜಿಲ್ಲಾ ಘಟಕದ ಸದಸ್ಯರಾಗಿದ್ದಾರೆ. ಜಿಲ್ಲಾಧ್ಯಕ್ಷರಾದ ಬಿಸ್ಮಿಲ್ಲಾ ಮುಲ್ಲಾ ಮಾತನಾಡಿ ನಿಜವಾದ ವಿಕಲಚೇತನರಿಗೆ ಅನ್ಯಾಯವಾಗುತ್ತಿದೆ. ನಮಗೆ ಸರ್ಕಾರದ ಸೌಲಭ್ಯ ನೀಡಿ ಸ್ವಾವಲಂಬನೆ ಬದುಕಿಗೆ ಅವಕಾಶ ನೀಡಿದರೆ ಸಾಕು. ವಿಕಲಚೇತನರಲ್ಲಿಯೂ ರಾಜ್ಯ ಹಾಗೂ ರಾಷ್ಟ ಮಟ್ಟಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಎಲ್ಲರಂತೆ ನಾವು ಎಲ್ಲ ರಂಗದಲ್ಲಿಯೂ ಸಾಧಿಸುವ ಛಲ ಹೊಂದಿದ್ದೇವೆ. ಈ ಸಂಘಟನೆ ವಿಕಲಚೇತನರ ಸರ್ವಾಂಗಿಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಾವು ಮುಂದೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಒಕ್ಕೂಟದ ಬಿಆರ್ ಆನಂದ.ಗೀತಾ.ವಸಂತ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಇತರ ವಿಕಲಚೇತನರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
