ಚಿತ್ರದುರ್ಗ
ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯಿಂದ ನಗರದಲ್ಲಿ ಅನುಷ್ಠಾನ ಆಗುತ್ತಿರುವ ಒಳಚರಂಡಿ ಸಂಪರ್ಕ ಕಾಮಗಾರಿ ಹಾಗೂ ಅಮೃತ್ ಯೋಜನೆ ಕುಡಿವ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳ ವಿಳಂಬಕ್ಕೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಂಟು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದಕ್ಕೆ ಬೇಸರಿಸಿದರು.
ನಗರದ ಧವಳಗಿರಿ ಬಡಾವಣೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಛೇರಿಯಲ್ಲಿ ಇಲಾಖಾ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಅನುಷ್ಥಾನಗೊಳಿಸುತ್ತಿರುವ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಕುಡಿಯುವ ನೀರು ಪೈಪ್ ಅಳವಡಿಸಲು ಈಗ ಅಗೆದಿರುವ ರಸ್ತೆಗಳನ್ನು ದುರಸ್ತಿ ಮಾಡದೆ ಬೇರೆ ಅಗೆಯಬಾರದು ಎಂದು ಷರತ್ತು ಹಾಕಿದರು. ಇದೇ ವೇಳೆ ಶಾಸಕರು ಮಂಡಳಿ ಎಂಡಿ ಜಯರಾಮ್, ಸಿಇ ಕೇಶವ್ ಜತೆ ದೂರವಾಣಿಯಲ್ಲಿ ಮಾತನಾಡಿ, ಥರ್ಡ್ ಪಾರ್ಟಿ ಅಧಿಕಾರಿಗಳನ್ನು ಕೆಲಸದಿಂದ ಬಿಡುಗಡೆ ಮಾಡಲು ಪತ್ರ ಬರೆಯುವುದಾಗಿ ತಿಳಿಸಿದರು.
ನಿತ್ಯ ಜನರ ಕೈಯಲ್ಲಿ ಬೈಸಿಕೊಳ್ಳೊದು ನೀವಲ್ಲ ಕಣ್ರಿ ನಾವು, ಊರು ತುಂಬಾ ಅಗೆದಿರುವ ರಸ್ತೆ ಮೊದಲು ಮುಚ್ಚಿ ಈಗ ನಡೆಯುತ್ತಿರುವ ಎಲ್ಲಾ ಕೆಲಸ ನಿಲ್ಲಿಸಬೇಕು, ಮಾಡಬೇಕಾದ ರಸ್ತೆ ಮಾಡಿಲ್ಲ ಅಂದರೆ ಕೆಲಸ ನಿಲ್ಲಿಸಬೇಕು, ಜನರಿಗೆ ಅದಷ್ಟು ಬೇಗ ಜನರಿಗೆ ಯುಜಿಡಿ ನೀಡಿ ಎಂದು ಶಾಸಕರು ಎಕ್ಸಿಕ್ಯುಟಿವ್ ಇಂಜಿನಿಯರ್ಗೆ ತಾಕೀತು ಮಾಡಿದರು.
ಆರೇಳು ವರ್ಷ ಕಳೆದರು ಸಹ ಯುಜಿಡಿ ಕಲಕ್ಷನ್ ಇನ್ನು ನೀಡಿಲ್ಲ, ಯಾವಗ ಜನರಿಗೆ ಕಲಕ್ಷನ್ ನೀಡುತ್ತೀರಾ ಯಾವಾಗ ಜನರು ಬಳಕೆ ಮಾಡೊದು ಎಂದು ಇಂಜಿನಿಯರ ವಿರುದ್ದ ಕಿಡಿಕಾರಿದರು. ಶಾಸಕನಾಗಿ ಜನರಿಗೆ ಏನು ಉತ್ತರ ಹೇಳಬೇಕು. ಯುಜಿಡಿ ಇಂಜಿನಿಯರ ಸಭೆಗೆ ಏಕೆ ಬಂದಿಲ್ಲ, ನಾವು ಕತ್ತೆ ಕಾಯೋಕೆ ಮೀಟಿಂಗ್ ಮಾಡತ್ತಿದ್ದೇವಾ ಎಂದು ದೂರವಾಣಿಯಲ್ಲಿ ಹರಿಹಯ್ದಾರು.
ಜನರು ಯುಜಿಡಿ ಕಾಲದಲ್ಲಿ ಬೇಸತ್ತು ಅಕ್ರೋಶ ವ್ಯಕ್ತಪಡಿಸುತ್ತಾರೆ. ಅಗೆದು 45 ದಿನದಲ್ಲಿ ರಸ್ತೆ ಮಾಡಬೇಕು ಎಂದು ಟೆಂಡರ್ ಪ್ರಕ್ರಿಯೆ ಇದ್ದರೆ ಏಕೆ ಮಾಡಿಲ್ಲ, ರಸ್ತೆಯನ್ನು ಹಲವು ಕಡೆ ನನ್ನ ಅನುದಾನದಲ್ಲಿ ಮಾಡಿದ್ದೇವೆ .ನಿಮಗೆ ಬಂದಿರುವ ರಸ್ತೆಯ ಹಣವನ್ನು ನಗರಸಭೆಗೆ ನೀಡಿದರೆ ಬೇರೆ ರಸ್ತೆಗೆ ಬಳಸಿಕೊಳ್ಳತ್ತಿವಿ. ಹಲವು ಕಡೆ ಮಾಡಿರುವ ರಸ್ತೆಗಳು ಕುಸಿಯುತ್ತಿವೆ ಎಂದರೆ ಯಾವ ಮಟ್ಟದಲ್ಲಿ ರಸ್ತೆ ಆಗಿದೆ.ರಸ್ತೆ ಮಾಡುವವರೆಗೂ ಇಂದಿನಿಂದ ಯಾವ ರಸ್ತೆ ಮಾಡಲು ಬಿಡಬೇಡಿ ಎಂದು ನಗರಸಭೆ ಸದಸ್ಯರಿಗೆ ಹೇಳಿದರು.
ನಗರದಲ್ಲಿ 300 ಕೋಟೆ ವೆಚ್ಚದಲ್ಲಿ ರಸ್ತೆ ಮಾಡಿಸಿದರೆ ಯುಜಿಡಿ ಮತ್ತು ಅಮೃತ್ ಯೋಜನೆಯವರು ಮನಸ್ಸಿಗೆ ಬಂದಂತೆ ರಸ್ತೆ ಅಗೆಯುತ್ತಾರೆ ಎಂದರೆ ಏನು ಅರ್ಥವಿಲ್ಲ . ದುರ್ಗದಲ್ಲಿ ಹೇಳುವವರು ಕೇಳುವವರಿಲ್ಲ ಎಂದು ತಿಳಿದುಕೊಂಡಿರ. ಹಗೆದಿರುವ ರಸ್ತೆ ಮುಚ್ಚಬೇಕು.ಇಲ್ಲ ಅಂದರೆ ಒಂದು ಇಂಚು ಕೆಲಸ ಮಾಡಲು ಬಿಡಲ್ಲ ಎಂದು ಎಚ್ಚರಿಸಿದರು.
ನಗರಸಭೆ ಪೌರಯುಕ್ತ ಚಂದ್ರಪ್ಪ ಮಾತನಾಡಿ ಯುಜಿಡಿ ಕೆಲಸ ಮಾಡುವವರಿಗೆ ಜವಾಬ್ದಾರಿ ಇಲ್ಲ, ಕಳಪೆ ಕಾಮಗಾರಿ ಮಾಡಿದ್ದನ್ನು ತಿಳಿಸಿದ್ದೇವೆ. ಅವರಿಗೆ ಹಣ ಬೇಕು ಕೆಲಸ ಮಾತ್ರ ಆಸಕ್ತಿಯಿಂದ ಮಾಡಲ್ಲ. 45 ದಿನಗಳಲ್ಲಿ ಮಾಡಬೇಕು, ಕ್ರಿಮಿನಲ್ ಹಾಕುವವರೆಗೂ ಬುದ್ದಿ ಬರಲ್ಲ. ಐ ಇನ್ಫಲೆನ್ಸ್ ಮಾಡಿಸಿ ಬಿಲ್ ಮಾಡಿಸಿಕೊಳ್ಳತ್ತಾರೆ ಎಂದು ಶಾಸಕರಿಗೆ ತಿಳಿಸಿದರು. ಒಡೆದ ಪೈಪ್ ಲೈನ್ ಅವರೆ ಸರಿ ಮಾಡಬೇಕು ಆದರೆ ಒಡೆದು ಹಾಕಿ ಸಂಬಂಧ ಇಲ್ಲದಂತೆ ವರ್ತಿಸುತ್ತಾರೆ ಎಂದು ಶಾಸಕರಿಗೆ ದೂರಿದರು.
ಎಕ್ಸಿಕ್ಯುಟಿವ್ ಇಂಜಿನಿಯರ್ ಹನುಮಂತಪ್ಪ ಮುಂದೆ ಎಲ್ಲಾ ಕೆಲಸಗಳನ್ನು ಆಗುವವರೆಗೂ ಸಹ ಯಾವುದೇ ಬಿಲ್ ಮಾಡಲ್ಲ , ಯುಜಿಡಿ ಏಜೆನ್ಸಿಯ ಪೈಪ್ ಲೈನ್ ಕೆಲಸ ನಿಲ್ಲಿಸಿ ರಸ್ತೆ ಮಾಡಲು ತಿಳಿಸುತ್ತೇನೆ. ಬೆಂಗಳೂರು ಎಂ.ಡಿ.ಗೆ ಪತ್ರ ಮೂಲಕ ತಿಳಿಸುತ್ತೇನೆ 100ಮೀಟರ್ ಹಗೆದು ರಸ್ತೆ ಕೆಲ ಮುಗಿಸಿ ಮುಂದೆ ಹೋಗಿ ಎಂದು ಇಂಜಿನಿಯರ್ ಮತ್ತು ಏಜೆನ್ಸಿ ಅವರಿಗೆ ತಿಳಿಸಿದರು.ನಗರಸಭೆ ಸದಸ್ಯರಾದ ಹರೀಶ್, ಶಶಿ, ಜಯ್ಯಣ್ಣ, ಸುರೇಶ್, ನಗಸಭೆ ಇಂಜಿನಿಯರ್ ಮತ್ತು ಕೆಡ್ಲೂಸಿ ಇಂಜಿನಿಯರ್ ಹಾಗೂ ಸಾರ್ಜಜನಿಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
