ಹುಳಿಯಾರು
ಹುಳಿಯಾರು ಸರ್ವೆನಂ 67 &70 ರಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಶಾಂ ಕಾಣೆಯಾಗಿದ್ದು ಇವುಗಳನ್ನು ಹುಡುಕಲು ನರೇಗಾ ಯೋಜನೆಯ ಒಂಬುಡ್ಸ್ ಮನ್ ಬರುತ್ತಿದ್ದಾರೆ ಎಂದು ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಚೆಕ್ ಡ್ಯಾಂ ನಿರ್ಮಿಸದೆ ಬಿಲ್ ಮಾಡಿಕೊಂಡಿದ್ದಾರೆಂದು 18/07/2018 ರಂದು ದೂರು ನಿಡಲಾಗಿತ್ತು. ಆದರೆ ಕೆಲ ಪ್ರಭಾವಿಗಳ ಸಹಕಾರದಿಂದ ಈ ಹಗರಣ ಮುಚ್ಚಿ ಹಾಕುವ ಪ್ರಯತ್ನಗಳು ನಡೆದವು. ಆದರೂ ದೂರುದಾರರ ಒತ್ತಡದ ಪರಿಣಾಮ ಜೂನ್ 27 ರಂದು ಬೆಳಿಗ್ಗೆ 11 ಕ್ಕೆ ತುಮಕೂರಿನ ನರೇಗಾ ಯೋಜನೆಯ ಒಂಬುಡ್ಸ್ ಮನ್ ತನಿಖೆಗೆ ಬರುತ್ತಿದ್ದಾರೆ.
ಈ ಹಗರಣದಲ್ಲಿ ಲೂಟಿಯಾಗಿರುವ ಹುಳಿಯಾರಿನ ಜನತೆಯ ಶ್ರಮದ ಬೆವರಿನ ದುಡಿಮೆಯ ತೆರಿಗೆ ಹಣವನ್ನು ವಸೂಲಿ ಮಾಡಿಸಲೇ ಬೇಕಿದ್ದು ಹುಳಿಯಾರಿನ ಎಲ್ಲಾ ನಾಗರೀಕರು ತಪ್ಪದೇ ಜೂ.27 ರಂದು ಬಂದು ಹೋರಾಟಗಾರರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.