ಪಂಚಾಯಿತಿಗೆ ಬುಧವಾರ ಮುತ್ತಿಗೆ

ಹೊಳಲ್ಕೆರೆ:

        ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ವೀರಸೌಧ ಬೀಗ ತೆಗೆದು ಒಳಗೆ ಪ್ರವೇಶಿಸಿ ಪಟ್ಟಣ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

        ಪಟ್ಟಣದ ವೀರ ಸೌಧವನ್ನು ಕಳೆದ ತಿಂಗಳು ರಾಜ್ಯ ರೈತ ಸಂಘಹಾಗೂ ಹಸಿರು ಸೇನೆಯವರು ಕೇಂದ್ರ ಉದ್ಘಾಟನೆ ಮಾಡಿ ಸಭೆ ನಡೆಸಿದ್ದರು.

       ವೀರ ಸೌಧ ನಿರ್ಮಾಣ ಆಗುವ ಮುನ್ನವೆ ಸ್ವಾತಂತ್ರ್ಯ ಹೋರಾಟಗಾರರಾದ ಕೊಟ್ರೆ ಬಸವರಾಜಪ್ಪನವರು ಮೌಖಿಕವಾಗಿ ಮುಂದಿನ ದಿನಗಳಲ್ಲಿ ರೈತ ಸಂಘದವರು ಬಳಸಿಕೊಳ್ಳಿ ಎಂದು ತಿಳಿಸಿ ಎಲ್ಲಾ ಕಡತಗಳನ್ನು ತಮ್ಮ ವಶಕ್ಕೆ ನೀಡಿದ್ದರು. ನಂತರ ದಿನಗಳಲ್ಲಿ ವಕೀಲರು ಬಾರ್ ಅಸೋಶಿಯೇಷನ್‍ಗಾಗಿ ಉಪಯೋಗಿಸಿದ್ದರಿಂದ ಸಮ್ಮನಿದ್ದೇವು. ಜಿಲ್ಲಾಧಿಕಾರಿಗಳಿಂದ ಆದೇಶ ಪಡೆದ ಅಕ್ಟೋಬರ್ 15ರಂದು ನೊಂದ ರೈತ ಸಂಘದ ಕೇಂದ್ರ ಎಂದು ಉದ್ಘಾಟಿಸಲಾಯಿತು. ಉದ್ಘಾಟನೆ ಆದ ಮರು ದಿನವೆ ಪ.ಪಂ ಮುಖ್ಯಾಧಿಕಾರಿ ಡಿ.ಉಮೇಶ್ ರವರ ಆದೇಶದ ಮೇರೆಗೆ ಪ.ಪಂ ಸಿಬ್ಬಂದಿಯವರು ಕೇಂದ್ರಕ್ಕೆ ಬೀಗ ಜಡಿದು ಹೋಗಿದ್ದರು.

       ರಾಜ್ಯಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಸಹ ಹೋರಾಟಗಾರರು ನಾವೇನು ಮೋಜು ಮಸ್ತಿಗಾಗಿ ಈ ವೀರಸೌಧ ಬಳಸುತ್ತಿಲ್ಲ. ನೇರ ಪ್ರತಿಕ್ರಿಯೇ ಬೀಗ ಮುರಿದು ಒಳಗೆ ಹೋಗಿದ್ದೇವು ಯಾರ ಮೇಲೆ ದೂರು ನೀಡುತ್ತಿರಾ ಎಂದು ಪ.ಪಂ ಮುಖ್ಯಾಧಿಕಾರಿಯವರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು.

      ಮಧ್ಯಪ್ರವೇಶಿಸಿ ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜ ನಮಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಸದಸ್ಯರಿಗೂ ಇದರ ಬಗ್ಗೆ ಗಮನವಿರುವುದಿಲ್ಲ. ಈಗ ಇದರ ಬಗ್ಗೆ 3 ನೇ ತತಾರೀಕಿಗೆ ಸಭೆಯಲ್ಲಿ ಈ ಪ್ರಸ್ತಾವನೆ ಇಟ್ಟು ನಿಮಗೆ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ತಾಲ್ಲುಕಿನ ಎಲ್ಲಾ ರೈತ ಸಂಘದವರು, ಪ.ಪಂ. ಸದಸ್ಯರುಗಳಾದ ಸಜೀಲ್, ಸಯ್ಯಿದ್ದ, ಕಾಂಗ್ರೆಸ್ ಮುಖಂಡ ಬಿ.ಎಸ್.ರುದ್ರಪ್ಪ ಉಪಸ್ಥಿತರಿದ್ದರು.ಪಿ.ಎಸ್.ಐ ಮಹೇಶ್ ಹಾಗೂ ಪೊಲೀಸ್ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಯಾವ ಗಲಾಟೆ ಘರ್ಷಣೆ ಆಗದಂತೆ ಸಮಾದಾನ ಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link