ಕೊರಟಗೆರೆ : ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ.

ಕೊರಟಗೆರೆ

     ಕೊರಟಗೆರೆ ಪಟ್ಟಣದಿಂದ ತುಮಕೂರಿಗೆ ಹೋಗುವ ಪ್ರಯಾಣಿಕರು ಮದ್ಯಾಹ್ನ 2 ಗಂಟೆಯಿಂದ ಸಂಜೆ 5-30 ವರೆಗೂ ಕೆ.ಎಸ್.ಆರ್.ಟಿ ಬಸ್ಸ್‍ಗಳಿಲ್ಲದೆ ಪರದಾಡಿ ನಂತರ ಖಾಸಗಿ ವಾಹನಗಳನ್ನು ಬಳಸಿ ತುಮಕೂರುಗೆ ಪ್ರಯಾಣ ಮಾಡಿದ ಘಟನೆ ಕೊರಟಗೆರೆ ಪಟ್ಟಣದಲ್ಲಿ ಸಾಮಾನ್ಯ ದೃಷ್ಯವಾಗಿದೆ.

    ಕೊರಟಗೆರೆ ಪಟ್ಟಣದಿಂದ ಪ್ರನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂರಾರು ಪ್ರಯಾಣಿಕರು ತಮ್ಮ ಕಾರ್ಯಗಳಿಗೆ ಪ್ರಯಾಣ ಮಾಡುತ್ತಿದ್ದು ಅದೇ ರೀತಿ ತುಮಕೂರಿನಿಂದ ಕೊರಟಗೆರೆ ಗೆ ಸರ್ಕಾರಿ ಕಛೇರಿಗಳು ಸೇರಿದಂತೆ ಇನ್ನಿತರ ಉದ್ಯೋಗದ ದೃಷ್ಠಿಯಿಂದ ಪ್ರಯಾಣ ಮಾಡುತ್ತಿರುವುದು ಸಾಮಾನ್ಯವಾಗಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನೆ ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗಿದ್ದು ತುಮಕೂರಿಗೆ ಪ್ರಯಾಣ ಮಾಡಲು ಬರುವ ಪ್ರಯಾಣಿಕರಿಗೆ ಮಧುಗಿರಿ ಮತ್ತು ಪಾವಗಡದಿಂದ ಬರುವ ಬಸ್‍ಗಳಲ್ಲಿ ಸರ್ಕಾರದ ಅದೇಶದಂತೆ ಪ್ರಯಾಣಿಕರು ತುಂಬಿರುತ್ತಿದ್ದು,

    ಕೊರಟಗೆರೆ ಪ್ರಯಾಣಿಕರಿಗೆ ಅವಕಾಶ ವಿರುವುದಿಲ್ಲ ಕೊರಟಗೆರೆ ಬಸ್ ನಿಲ್ದಾಣದಿಂದ ಯಾವುದೇ ಬಸ್‍ಗಳ ವ್ಯವಸ್ಥೆಯಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಸಂಬಂದಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಬೆಳಿಗ್ಗೆ, ಮದ್ಯಾಹ್ನ ಹಾಗೂ ಸಂಜೆ ಕೊರಟಗೆರೆ ಬಸ್ ನಿಲ್ದಾಣದಿಂದ ಹೊರಡುವ ಬಸ್ಸ್‍ಗಳ ವ್ಯವಸ್ಥೆ ಮಾಡಬೇಕಾಗಿ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link