ಬೆಂಗಳೂರಿಗೆ ತೆರಳಲು ಕೆಎಸ್‍ಆರ್‍ಟಿಸಿ ನಿಲ್ದಾಣದ ಮುಂದೆ ಜಮಾಯಿಸಿದ ಪ್ರಯಾಣಿಕರು

ಚಳ್ಳಕೆರೆ

    ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಲು ನಗರದ ಅನೇಕ ಪ್ರಯಾಣಿಕರು, ಬುಧವಾರ ಬೆಳ್ಳಂಬೆಳಗ್ಗೆಯೇ ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಒಂದು ಕಿ.ಮೀ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು.

     ಚಳ್ಳಕೆರೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಕೆಲವು ಬಸ್‍ಗಳನ್ನು ಮಾತ್ರ ಬಿಡಲಾಗುವುದು ಎಂಬ ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಹೇಳಿಕೆ ಮೇರೆಗೆ ಬೆಂಗಳೂರಿನಲ್ಲಿ ತೆರಳುವವರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಚಿತ್ರದುರ್ಗ, ಮೊಳಕಾಲ್ಮೂರು ಮತ್ತು ಹಿರಿಯೂರಿಗೂ ಸಹ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬಸ್ ವ್ಯವಸ್ಥೆ ಮಾಡುವುದಾಗಿ ಘಟಕದ ಮ್ಯಾನೇಜರ್ ಹುಸೇನ್ ತಿಳಿಸಿದರು.

    ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆ ಜನಜಂಗುಳಿ ಸೇರಿದ ಬಗ್ಗೆ ಮಾಹಿತಿ ಪಡೆದ ವೃತ್ತ ನಿರೀಕ್ಷಕ ಈ.ಆನಂದ, ಪಿಎಸ್‍ಐ ನೂರ್ ಆಹಮ್ಮದ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾವಿಸಿ, ಗುಂಪು, ಗುಂಪಾಗಿ ನಿಂತಿದ್ದ ಜನರನ್ನು ಬೇರ್ಪಡಿಸಿ ಸರಥಿಸಾಲಿನಲ್ಲಿ ಬರುವ ರೀತಿ ವ್ಯವಸ್ಥೆ ಮಾಡಿದರು. ಕಾರಣ, ಟಿಕೆಟ್ ಪಡೆಯುವ ಮತ್ತು ಆರೋಗ್ಯ ಪರೀಕ್ಷೆ ನೆಪದಲ್ಲಿ ಜನರ ಮುನ್ನುಗಲು ತೊಡಗಿದಾಗ ಆತಂಕ ಉಂಟಾಗಿತ್ತು.

     ಈ ಸಂದರ್ಭದಲ್ಲಿ ಪ್ರಯಾಣಿಕರಲ್ಲಿ ಮನವಿ ಮಾಡಿದ ಪೊಲೀಸ್ ಇಲಾಖೆ, ಸಾರಿಗೆ ಸಂಸ್ಥೆ ಅಧಿಕಾರಿಗಳು ಎಷ್ಟೇ ಜನರು ಇರಲಿ ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗವುದು ಎಂದು ಭರವಸೆ ನೀಡಿದ ನಂತರ ಜನರ ಆತಂಕ ನಿವಾರಣೆಯಾಯಿತು. ಬುಧವಾರ ಸುಮಾರು 10ಕ್ಕೂ ಹೆಚ್ಚು ಬಸ್‍ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link