ಪಠ್ಯದ ಜೊತೆ ಸಾಂಸ್ಕೃತಿಕತೆಯೂ ಮುಖ್ಯ

ಚಿತ್ರದುರ್ಗ;

      ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳ ವಿಷಯ ಆಧರಿಸಿ ಅಭ್ಯಾಸ ಮಾಡಿದರೆ ಸಾಲದು.ಅದರೊಟ್ಟಿಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಹೆಚ್.ಗೋವಿಂದಪ್ಪ ಅಭಿಪ್ರಾಯ ಪಟ್ಟರು ನಗರದ ನೆಹರೂ ನಗರದ ಜ್ಞಾನವಿಕಾಸ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

        ಇಂದಿನ ಬಹುತೇಕ ಮಕ್ಕಳು ಪಠ್ಯ ಪುಸ್ತಕವನ್ನು ಅವಲಂಭಿಸಿದ್ದಾರೆ. ಅದನ್ನು ಹೊರೆತು ಪಡಿಸಿ ಯಾವ ಪುಸ್ತಕಗಳನ್ನೂ ಓದುತ್ತಿಲ್ಲ. ಇತರೆ ಪುಸ್ತಕಗಳನ್ನು ಓದುವುದರಿಂದ ಮಕ್ಕಳ ಜ್ಞಾನಾರ್ಜನೆಯೂ ಹೆಚ್ಚುತ್ತದೆ. ಅದರ ಜೊತೆ ಜೊತೆಗೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು

         ಈ ಶಿಕ್ಷಣ ಸಂಸ್ಥೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರೇರಿತವಾಗಿದೆ ಎಂದರಲ್ಲದೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

       ಬಿ.ಆರ್.ಸಿ.ಈಶ್ವರಪ್ಪ ಮಾತನಾಡಿ, ಜ್ಞಾನವಿಕಾಸ ಶಾಲೆ ಉತ್ತಮ ಶಿಕ್ಷಣ ವ್ಯಕ್ತಿತ್ವದೊಂದಿಗೆ ಮಾದರಿಯಾಗಿದೆ. ಸಮಾಜದ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಸಂಸ್ಥೆ ಕೂಡ ಮಹತ್ವದ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದ ನೆಹರೂ ನಗರದಲ್ಲಿರುವ ಈ ವಿದ್ಯಾಸಂಸ್ಥೆಯು ಕಳೆದ 15 ವರ್ಷದಿಂದ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಕರನ್ನೊಳಗೊಂಡು ಶಿಕ್ಷಣವನ್ನು ನೀಡುವುದರೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು

      ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸಂಸ್ಥೆಯ ಸಂಸ್ಥಾಪಕ ಡಿ.ಮಲ್ಲಿಕಾರ್ಜುನ್ ಮಾತನಾಡಿ, ಈ ಸಂಸ್ಥೆಯು ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದೆ ಈ ಸಂಸ್ಥೆಯಲ್ಲಿ ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವರು ಇದ್ದಾರೆ. ಹಾಗೆ ನಾವೆಲ್ಲರೂ ಕೂಡಿ ಇನ್ನೂ ಹೆಚ್ಚಿನದಾಗಿ ಶಿಕ್ಷಣವನ್ನು ಕೊಡಿಸುವಲ್ಲಿ ಸ್ಪೂರ್ತಿದಾಯಕವಾಗಿ ಶ್ರಮಿಸೋಣ ಎಂದರು

      ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ದಯಾನಂದ್, ಮಹಾಲಿಂಗಪ್ಪ ಎಸ್.ಟಿ, ಶ್ರೀಮತಿ ಸವಿತಾ.ಎಸ್.ಟಿ ಬಿ.ಆರ್.ಸಿ, ಸಾವಿತ್ರಮ್ಮ. ಬಿ.ಆರ್.ಪಿ, ರಾಜಣ್ಣ.ಎನ್. ಸಿ.ಆರ್.ಪಿ ಮತ್ತು ಡಿ.ಎಸ್.ಆರ್.ಟಿ, ಅನಿಲ್.ಪಿ.ಎನ್. ಬಿ.ಆರ್.ಪಿ, ದೇವರಾಜ್.ಹೆಚ್, ಬಿ.ಆರ್.ಪಿ, ನಾಗರಾಜ್.ಎಂ.ಆರ್. ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link