ಜ.30ರಿಂದ ನಾಡಕಛೇರಿಗೆ ಅರ್ಜಿ ಸಲ್ಲಿಸಬಹುದು : ರಾಮಪ್ರಸಾತ್ ಮನೋಹರ್

ಹರಪನಹಳ್ಳಿ:

        ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿರುವ ಹಿನ್ನೆಲೆಯಲ್ಲಿ ಸಂವಿಧಾನದ 371ಜೆ ಹೈ.ಕ.ಸೌಲಭ್ಯದ ಪ್ರಮಾಣ ಪತ್ರ ನೀಡಲು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಳಂಭವಾಗಿದ್ದು ಸದ್ಯಕ್ಕೆ ಸಮಸ್ಯೆಯನ್ನು ಬಗೆಹರಿದಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಹೇಳಿದರು.

        ಅವರು ತಾಲ್ಲೂಕು ಆಡಳಿತ ಕಛೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 371ಜೆ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಜ.30ರಿಂದ ಸಂಬಂಧಿಸಿದ ನಾಡಕಛೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳದೊಳಗಾಗಿ ಪ್ರಮಾಣ ಪತ್ರವನ್ನು ಕಛೇರಿಯಿಂದ ಪಡೆಯಬಹುದು ಎಂದರು.

         ತಾಲೂಕಿನ ಎಲ್ಲಾ ನಾಗರೀಕರು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಎಲ್ಲರೂ ಏಕ ಕಾಲಕ್ಕೆ ಅರ್ಜಿ ಸಲ್ಲಿಸದೆ ಅವಶ್ಯಕತೆ ಇದ್ದವರು ಮಾತ್ರ ಸಲ್ಲಿಸುವುದರಿಂದ ಪ್ರಮಾಣ ಪತ್ರ ನೀಡಲು ಅನುಕೂಲವಾಗುತ್ತದೆ. ಅಧಿಕಾರಿಗಳ ಪರಿಚಯ, ವಿವಿಧ ಇಲಾಖೆಗಳಲ್ಲಿನ ಅಡೆತಡೆಗಳ ಬಗ್ಗೆ ಹಾಗೂ 371ಜೆ ಪ್ರಮಾಣ ಪತ್ರವನ್ನು ವಿತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು.
ತಾಲೂಕು ಬರಗಾಲವಿದ್ದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ತಾಲ್ಲೂಕು ಆಡಳಿತ ಕಾರ್ಯನ್ಮೋಕವಾಗಿದೆ.

        ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಖಾಸಗಿ ಬೊರವೆಲ್ಗಳಿಂದ ನೀರು ವಿತರಿಸಲಾಗುವುದು. ನೀರು ನೀಡುವ ಖಾಸಗಿ ಬೊರವೆಲ್ ಮಾಲೀಕರಿಗೆ ತಿಂಗಳಿಗೆ 11ಸಾವಿರ ನೀಡಲಾಗುವುದು. ಆದಾಗ್ಯೂ ನೀರಿನ ಸಮಸ್ಯೆ ಕಂಡುಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.

        ಕೊಟ್ಟೂರು ಮತ್ತು ಹಡಗಲಿ ತಾಲ್ಲೂಕುಗಳು ಒಳಗೊಂಡ ಹರಪನಹಳ್ಳಿ ಉಪವಿಭಾಗ ಕುರಿತಂತೆ ಅಂತಿಮ ಅಧಿಸೂಚನೆ ಇನ್ನೂ ಆಗಿಲ್ಲ. ಕೊಟ್ಟೂರು, ಹೂವಿನ ಹಡಗಲಿ ತಾಲೂಕಿನ ಜನತೆ ತುರ್ತು ಕೆಲಸಗಳಿದ್ದರೆ ಇಲ್ಲಿಯ ಎಸಿ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬಹುದು ಎಂದರು.

         ತಿಂಗಳಗೊಮ್ಮ ಹರಪನಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿ ಜನರ ಸಮಸ್ಯೆ ಪರಿಹರಿಸಲಾಗುವುದು. ಉಪವಿಭಾಗ ಕಚೇರಿಯಲ್ಲಿ ಡಿಸಿ ಸೆಲ್ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ನಿತೀಶ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಶೀಲ್ದಾರ ಡಾ.ನಾಗವೇಣಿ, ಇಒ ಮಮತಾ ಹೊಸಗೌಡರು, ಗ್ರೇಡ್-2 ತಹಶೀಲ್ದಾರ ರವಿ, ಕೃಷಿ ಎಡಿ ತಿಪ್ಪೇಸ್ವಾಮಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link