ಹುಳಿಯಾರು:
ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಚಿಕ್ಕಬಿದರೆಯ ಬಸ್ ನಿಲ್ದಾಣದ ವಿದ್ಯುತ್ ಕಂಬಕ್ಕೆ ಬೀದಿ ದೀಪ ಅಳವಡಿಸುವಂತೆ ಇಲ್ಲಿನ ಸತೀಶ್ ಮನವಿ ಮಾಡಿದ್ದಾರೆ.
ಚಿಕ್ಕಬಿದರೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಕರ ಅನುಕೂಲಕ್ಕಾಗಿ ಸೋಲಾರ್ ಬೀದಿ ದೀಪ ಅಳವಡಿಸಲಾಗಿತ್ತು. ಆದರೆ ಈ ದೀಪದ ಬ್ಯಾಟರಿ ವರ್ಷಗಳ ಹಿಂದೆ ಕಳವು ಆಗಿತ್ತು. ಹೊಸ ಬ್ಯಾಟರಿ ಹಾಕದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತೆ ಮಾಡಲಾಗಿದೆ.
ಹಾಗಾಗಿ ಸಾರ್ವಜನಿಕರ ಒತ್ತಡ ಹಾಕಿದ ಫಲದಿಂದಾಗಿ ಸೋಲಾರ್ ಬದಲಿಗೆ ಈ ಕಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ದೀಪವನ್ನು ಬೆಳಗಿಸಿದ್ದರು. ಆದರೆ ಈಗ ದೀಪವನ್ನು ಕಳವು ಮಾಡಿದ್ದು ಸುಮಾರು 15 ದಿನಗಳಿಂದ ಕತ್ತಲಲ್ಲಿ ಜನ ಓಡಾಡುತ್ತಿದ್ದಾರೆ.ತಕ್ಷಣ ದೊಡ್ಡಬಿದರೆಯ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಈ ಕಂಬಕ್ಕೆ ಬಲ್ಪ್ ಅಳವಡಿಸಿ ರಾತ್ರಿವೊತ್ತು ವಿದ್ಯುತ್ ದೀಪ ಬೆಳಗುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸತೀಶ್ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/7HULIYAR2.gif)