ಕೊಟ್ಟೂರು

ಕೊಟ್ಟೂರಿನಲ್ಲಿ ಮತ್ತೇ ಎರಡು ಕಡೆಗಳಲ್ಲಿ ಕಳ್ಳತನ ಜರುಗಿದ್ದು ನಾಗರೀಕರು ಭಯ ಭೀತರಾಗಿದ್ದಾರೆ. ಸ್ಥಳೀಯ ಪೊಲೀಸರ ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡು ಕಳ್ಳತನವೊಂದರ ಪ್ರಕರಣವನ್ನು ಭೇದಿಸಿ ಕಳ್ಳರನ್ನು ವಶಕ್ಕೆ ಪಡೆದುಕೊಂಡ ಘಟನೆ ಭಾನುವಾರ ನಡೆದಿದೆ.
ಪಟ್ಟಣದಲ್ಲಿ ಕೆಲದಿನಗಳಲ್ಲಿಂದ ಜನತೆ ನೆಮ್ಮದಿಯ ಜೀವನ ನಡೆಸಿದ್ದರು. ಆದರೆ ಶುಕ್ರವಾರ ಮದ್ಯರಾತ್ರಿ ರೇಣುಕ ದೇವಸ್ಥಾನದ ಮುಂಬಾಗದಲ್ಲಿನ ಖಾಸಗಿಯವರ ಅಂಗಡಿ ಪಂಪಾಪತಿ ಯವರ ಖಾಸಗಿ ಸೌಹಾರ್ದ ಬ್ಯಾಂಕಿನ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಬ್ಯಾಂಕಿನ ಟೇಬಲ್ನಲ್ಲಿ ಇರಿಸಲಾಗಿದ್ದ ಸುಮಾರು 7-8 ಸಾವಿರ ರೂಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ನಂತರ ದಿನ ಶನಿವಾರ ರಾತ್ರಿ ಮತ್ತೇ ಕಳ್ಳರು ಕೈಚಳಕ ತೋರಿಸಿ ಪಟ್ಟಣದ ತೇರುಗಡ್ಡೆ ಬಳಿ ಇರುವ ಜಂಬೂರು ಸತೀಶ್ ಎಂಬುವರ ಮೊಬೈಲ್ ಅಂಗಡಿಯ ಷೆಟರ್ಗಳನ್ನು ಹಾರೆಕೋಲಿನ ಅಯುಧದಿಂದ ತೆಗೆದು ಒಳ ನುಗ್ಗಿ ಹಲವಾರು ಬಾರಿ ಬೆಲೆ ಬಾಳುವ ಹೊಸ ಮೊಬೈಲ್ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಪ್ರಕರಣ ನಡೆಯುತ್ತಿದ್ದಂತೆ ಜನತೆ ಭಯಗೊಂಡು ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಜಾಗೃತಗೊಂಡ ಸಬ್ಇನ್ಸ್ಪೆಕ್ಟರ್ ಎ ಕಾಳಿಂಗ ಕೂಡಲೇ ಕಾರ್ಯಾಚರಣೆ ಕೈಗೊಂಡು ಲಾಡ್ಜ್ ವೊಂದರಲ್ಲಿ ಠಿಕಾಣೆ ಹೂಡಿದ್ದ ಇಬ್ಬರು ಅನುಮಾನಸ್ಪದ ಯುವಕರನ್ನು ಹಿಡಿದು ಜಾಲಾಡಿಸಿದ್ದು ಹಲವಾರು ಮೊಬೈಲ್ ಸೆಟ್ಗಳ ಸಮೇತ ಕಳ್ಳರನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಕರೆದೋಯ್ದರು. ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಪೋಲೀಸ್ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಶರಣಪ್ಪ ಮತ್ತಿತರರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
