ಚಿತ್ರದುರ್ಗ:
ಸಂತೇಹೊಂಡ ಹಾಗೂ ಮೆದೇಹಳ್ಳಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ರಸ್ತೆಯ ಪಕ್ಕದಲ್ಲಿಯೇ ತರಕಾರಿ ಹಣ್ಣ ಹಂಪಲುಗಳನ್ನು ಮಾರಾಟ ಮಾಡುತ್ತಿದ್ದವರನ್ನು ಸಂಚಾರಿ ಠಾಣೆ ಸಬ್ಇನ್ಸ್ಪೆಕ್ಟರ್ ರೇವತಿರವರು ತೆರವುಗೊಳಿಸಿ ಇನ್ನು ಮುಂದೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದರು.
ಸಂತೆಹೊಂಡದ ರಸ್ತೆಯಲ್ಲಿ ದಿನನಿತ್ಯವೂ ತರಕಾರಿ ಮಾರಾಟ ಮಾಡುವ ಅಂಗಡಿಗಳವರು ಪುಟ್ಟಿಗಳನ್ನು ರಸ್ತೆಗೆ ತಂದಿಟ್ಟು ವ್ಯಾಪಾರ ಮಾಡುವುದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅಡ್ಡಿಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅದೇ ರೀತಿ ಬಾಳೆಹಣ್ಣು, ಸೊಪ್ಪು ತರಕಾರಿ, ನಿಂಬೆಹಣ್ಣು, ತೆಂಗಿನಕಾಯಿಗಳನ್ನು ರಾಶಿ ಹಾಕಿಕೊಂಡು ರಸ್ತೆಯಲ್ಲಿಯೇ ಮಾರಾಟ ಮಾಡುತ್ತಿದ್ದರಿಗೆ ಸಂಚಾರಿ ಜಾಗೃತಿ ಮೂಡಿಸಿದ ರೇವತಿರವರು ಇನ್ನು ಮುಂದೆ ರಸ್ತೆಯಲ್ಲಿ ಮಾರಾಟ ಮಾಡಿದರೆ ದಂಡ ವಿಧಿಸಬೇಕಾಗುತ್ತದೆಂದು ತಿಳಿಸಿದರು.
ಸಂತೇಹೊಂಡದ ಗೋಡೆಗೆ ಹೊಂದಿಕೊಂಡಂತೆ ಆಟೋ ಸ್ಟಾಂಡ್ ನಿರ್ಮಿಸಿಕೊಂಡಿರುವ ಚಾಲಕರುಗಳಿಂದಲೂ ಸಂಚಾರಕ್ಕೆ ಕಿರಿಕಿರಿಯಾಗುತ್ತಿದ್ದು, ಪ್ಯಾಸೆಂಜರ್ ಆಟೋದವರಿಗೂ ಇನ್ನು ಮುಂದೆ ಇಲ್ಲಿ ಆಟೋಗಳನ್ನು ನಿಲ್ಲಿಸದಂತೆ ಸೂಚಿಸಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮ ಸಂಚಾರಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
