ಸಿಂಗಾಪುರ ಬಳಿ ರಸ್ತೆ ಅಪಘಾತ : ಮೃತರ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಚಿತ್ರದುರ್ಗ

     ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೂಡಲೇ 20 ಲಕ್ಷ ಪರಿಹಾರ ನೀಡಬೇಕು.ಸಿಂಗಾಪುರ ಕ್ರಾಸ್ ಬಳಿ ಹೊಳಲ್ಕೆರೆ ರಸ್ತೆಗೆ ಹಂಪ್ಸ್ ಹಾಕಿಸಬೇಕು. ಪ್ರತಿಫಲನ ದೀಪ ಅಳವಡಿಸಬೇಕು ಅಜಾಗರುಕತೆ ತೋರಿದ ಆಂಬುಲೆನ್ಸ್ ಚಾಲಕನನ್ನು ಅಮಾನತು ಮಾಡಬೇಕು. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

     ಚಿತ್ರದುರ್ಗ ತಾಲೂಕಿನ ಸಿಂಗಾಪುರ ಗ್ರಾಮದ ಬಳಿ ನಿನ್ನೆ ಸಂಜೆ 7 ರ ಸುಮಾರಿಗೆ ಕಾಲೇಜಿನಿಂದ ಬಂದ ಪಲ್ಲವಿ(18) ರಸ್ತೆ ದಾಟುವ ವೇಳೆ ಅಂಬುಲೆನ್ಸ್ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ ಇಂದು ಇದನ್ನು ಪ್ರತಿಭಟಿಸಿ ಜಿಲ್ಲಾ ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ಬಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮೃತ ಪಲ್ಲವಿಯ ಬಂಧುಗಳು ಮತ್ತು ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಸರ್ಕಾರವನ್ನು ಆಗ್ರಹಿಸಿದರು.

     50ರಿಂದ 80 ಮಕ್ಕಳು ಬರುತ್ತಾರೆ. ನಿತ್ಯ ಓಡಾಡುತ್ತಾರೆ ಮಾನವೀಯತೆ ದೃಷ್ಠಿಯಿಂದ ನಿಲುಗಡೆ ಮಾಡಿಲ್ಲ. ಪ್ರಾಥಮಿಕ ಚಿಕಿತ್ಸೆ ನೀಡಿಲ್ಲ. ಹಾವು ಕಚ್ಚಿದ್ದು ಸುಳ್ಳು, 50 ಮೀಟರ್ ದೂರ ಹೋಗಿ ಬಾಡಿ ಬಿದ್ದಿದೆ. ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಎಚ್ಚರಿಕೆ ನೀಡಬೇಕು. ನಿಲುಗಡೆಗೆ ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿ ಅಲ್ಲಿ ಇದೆ.ಬೇಡಿಕೆ ಈಡೇರದೆ ಇದ್ದರೆ ಶಿವಮೊಗ್ಗ ರಸ್ತೆ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ.

     ಪಲ್ಲವಿ ಕುಟುಂಬಕ್ಕೆ ಮತ್ತೆ ಬರುವುದಿಲ್ಲ. ಇತರ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ನಮ್ಮ ಸಮಾಜಕ್ಕೆ ಅನ್ಯಾಯ ಆಗುತ್ತಿವೆ. ಎಲ್ಲರ ಮನೆಯಲ್ಲಿ ಕಾರು, ಬೈಕ್ ಇಲ್ಲ.ನಗರದಿಂದ 14 ಕಿ.ಮಿ ದೂರ ಇದೆ ಸಿಟಿ ಬಸ್ ಸೇವೆ ನೀಡಬೇಕು ಎಂದು ಆಗ್ರಹಿಸಿ ಸಂಜೆ 7ಕ್ಕೆ ಹೊಳಲ್ಕೆರೆ ಕಡೆಯಿಂದ ಬರುವ ಎಲ್ಲ ಖಾಸಗಿ ಮತ್ತು ಸರ್ಕಾರಿ ಬಸ್ ನಿಲುಗಡೆ ಮಾಡಬೇಕು ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದರು.

     ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದಾಗ ಎಡಿಸಿ ಸಂಗಪ್ಪ ಹಾಗೂ ಜಿಲ್ಲಾ ಅರೋಗ್ಯಾಧಿಕಾರಿ ಬಂದಿದ್ದರು. ಸಿಂಗಪುರ ಕವಾಲುಹಟ್ಟಿಯಲ್ಲಿ ವಾಸ್ತವ್ಯಕ್ಕೆ ಪಟ್ಟು. ಬಸ್ ಸಂಚಾರ ಪರೀಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

     ಮನವಿ ಸ್ವೀಕಾರ ಮಾಡಿದ ಎಡಿಸಿ ಸಂಗಪ್ಪ ಮಾತನಾಡಿ ಗ್ರಾಮಕ್ಕೆ ಜಿಲ್ಲಾಧಿಕಾರಿಯನ್ನು ಕರೆತರುವ ಜವಾಬ್ದಾರಿ ನನ್ನದು. ಮೃತರಿಗೆ ಸಂತಾಪ ಸೂಚಿಸುತ್ತೇನೆ. ಯಾರ ಮನೆಯಲ್ಲೂ ಇಂತಹ ಅವಘಡ ಆಗಬಾರದುಆರೋಪಿ ಬಂಧನ ಮಾಡಲಾಗಿದೆ ಹಂಪ್ಸ್ ಹಾಕಲು ಕ್ರಮ ಕೈಗೊಳ್ಳುತ್ತೇವೆ. ಸಿಟಿ ಬಸ್ ಸಂಚಾರಕ್ಕೆ ಪರಿಶೀಲನೆ ಮಾಡಲಾಗುತ್ತದೆ. ಪರಿಹಾರಕ್ಕೆ ಸಿಎಂ ನಿಧಿಗೆ ಕಳುಹಿಸುತ್ತೇವೆ ಎಂದು ಭರವಸೆ ನೀಡಿ ಸ್ಕೂಲ್ ಜೋನ್ ಬೋರ್ಡ್ ಹಾಕಿಸಲಾಗುವುದು. ಸಿಟಿ ಬಸ್ ಸೇವೆ ಒದಗಿಸುವ ಬಗ್ಗೆ ಆಲೋಚಿಸಲಾಗುವುದು, ಬಸ್ ನಿಲುಗಡೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಜೊತೆ ಚರ್ಚೆ ಮಾಡಲಾಗುವುದು ಹಂಪ್ಸ್ ಕೂಡಲೇ ಹಾಕುವುದಾಗಿ ಆಶ್ವಾಸನೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link