ರೈಲ್ವೆ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಆಗ್ರಹ

ದಾವಣಗೆರೆ :

   ರೈಲ್ವೆ ಇಲಾಖೆಯ ಡಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ರೈಲ್ವೆ ನೇಮಕಾತಿ ಹೋರಾಟ ಸಮಿತಿಯ ನೇತೃತ್ವವದಲ್ಲಿ ಪರೀಕ್ಷಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

   ನಗರದಲ್ಲಿ ರೈಲು ತಡೆ ಹೋರಾಟಕ್ಕೆ ಸಮಿತಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಪೆÇಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಹಾಕಿ, ರೈಲು ತಡೆಯನ್ನು ವಿಫಲಗೊಳಿಸಿದ ಹಿನ್ನೆಲೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಪರೀಕ್ಷಾರ್ಥಿಗಳು ರೈಲು ನಿಲ್ದಾಣದ ಆವರಣದಲ್ಲೇ ಪ್ರತಿಭಟನಡೆ ನಡೆಸಿ ನಿಲ್ದಾಣ ವ್ಯವಸ್ಥಾಪಕರ ಮೂಲಕ ಕೇಂದ್ರ ರೈಲ್ವೆ ಖಾತೆ ಸಚಿವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸಂಚಾಲಕ ರಂಘನಾಥ್, ರಾಜ್ಯದ ನೈರುತ್ಯ ರೈಲ್ವೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ 2012-13ರಲ್ಲಿ ರೈಲ್ವೆ ನೇಮಕಾತಿ ಕೋಶ (ಆರ್‍ರ್‍ಸಿ) ಆರಂಭಿಸಲಾಗಿತ್ತು. ಆ ವೇಳೆ ಡಿ ದರ್ಜೆ ನೌಕರರಾಗಿ ಶೇ. 80ರಷ್ಟು ಕನ್ನಡಿಗರು ಆಯ್ಕೆಯಾಗಿದ್ದರು. ಆದರೆ, 2017-18ರಲ್ಲಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಂಡಿದ್ದರಿಂದ 2200 ಹುದ್ದೆಗಳಲ್ಲಿ 22 ಮಂದಿ ಕನ್ನಡಿಗರು ನೇಮಕಗೊಂಡಿದ್ದಾರೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

    ಕೇಂದ್ರೀಕೃತ ವ್ಯವಸ್ಥೆಯಿಂದ ದೇಶದ ಎಲ್ಲಿ ಬೇಕಾದರೂ ಪರೀಕ್ಷೆ ಬರೆಯಬಹುದಾಗಿದೆ. ಪಠ್ಯಕ್ರಮವೂ ಉತ್ತರ ಭಾರತದಲ್ಲಿ ತಯಾರುತ್ತಿದ್ದು, ಕರ್ನಾಟಕ ಸೇರಿ ದಕ್ಷಿಣ ಭಾರತದ ಪರೀಕ್ಷಾರ್ಥಿಗಳಿಗೆ ಈ ವ್ಯವಸ್ಥೆಯಿಂದ ಅನ್ಯಾಯವಾಗುತ್ತಿದೆ. ಅಲ್ಲದೇ, ಇದರಿಂದ ಅಕ್ರಮಗಳು ನಡೆಯುವ ಸಾಧ್ಯತೆ ಎಂದು ಅವರು ದೂರಿದರು.

   ಮೊದಲಿನಂತೆ ಆರ್‍ಆರ್‍ಸಿ ಮೂಲಕ ಪರೀಕ್ಷೆ ನಡೆಸಬೇಕು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯರಿಗೆ ಶೇ.80 ಮೀಸಲಾತಿ ಕಲ್ಪಿಸಿರುವ ಮಾದಿರಯಲ್ಲಿಯೇ ಕರ್ನಾಟಕದಲ್ಲೂ ಮೀಸಲಾತಿ ಕಲ್ಪಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

   ಪ್ರತಿಭಟನೆಯಲ್ಲಿ ಸಮಿತಿಯ ಟಿ.ಎಚ್.ಮಂಜುನಾಥ, ಶಿವರಾಜ, ಮಂಜುನಾಥ, ಮಾರುತಿ, ನಾಗರಾಜ, ಮಂಜು ಗಾಂಧಿ ನಗರ, ಪುರುಷೋತ್ತಮ, ಎಂ.ಕೆ.ರವೀಂದ್ರ, ಟಿ.ಕೆ.ದಾನೇಗೌಡ, ಸಂತೋಷ ರಾಜ್, ಪಿ.ಮಂಜುನಾಥ, ಎಚ್.ನಾಗರಾಜ, ಬಿ.ಟಿ.ರಘು, ವಿ.ಮಂಜುನಾಥ, ನಿಂಗರಾಜ, ಎನ್.ಮಂಜುನಾಥ, ಕಲ್ಲೇಶ,, ವೆಂಕಟೇಶ, ಸಿದ್ದೇಶ, ಹನುಮಂತ, ಮಹಾಂತೇಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link