ಬೆಂಗಳೂರು
ವಿವಾಹಿತ ಪ್ರೇಮಿಯೊಂದಿಗೆ ಅಪ್ರಾಪ್ತ ಬಾಲಕಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗೌರಿಬಿದನೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹದೇಶ್ವರ ಬಡಾವಣೆ ಬಳಿ ನಡೆದಿದೆ.
ಗೌರಿಬಿದನೂರಿನ ರವಿಕುಮಾರ್(30) ಹಾಗೂ ಮಂಚೇನಹಳ್ಳಿಯ ವರವಣಿ ಗ್ರಾಮದ ಹರ್ಷಿಣಿ(17)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ,ಮಂಡ್ಯ ಮೂಲದ ವರ್ಷಿಣಿ ವರವಣಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು ಗೌರಿಬಿದನೂರಿಗೆ ಬಂದು ಹೋಗುವಾಗ ಹೂವಿನ ವ್ಯಾಪಾರ ಮಾಡುತ್ತಿದ್ದ ರವಿಕುಮಾರ್ ಜೊತೆ ಪರಿಚಯವಾಗಿ ಸ್ನೇಹಕ್ಕೆ ತಿರುಗಿ ಇಬ್ಬರು ಪ್ರೀತಿಸ ತೊಡಗಿದ್ದಾರೆ.
ಈಗಾಗಲೇ ವಿವಾಹವಾಗಿದ್ದರೂ ರವಿಕುಮಾರ್ ವರ್ಷಿಣಿ ಜೊತೆ ಸುತ್ತಾಡುತ್ತಿದ್ದು ಮನೆಯವರಿಗೆ ಗೊತ್ತಾಗಿ ಗಲಾಟೆ ನಡೆದಿತ್ತು ಇದರಿಂದ ನೊಂದು 20 ದಿನಗಳ ಹಿಂದೆ ರವಿಕುಮಾರ್ ಹಾಗೂ ಹರ್ಷಿಣಿ ತಮ್ಮ ಮನೆಗಳನ್ನು ಬಿಟ್ಟು ನಾಪತ್ತೆಯಾಗಿದ್ದರು.
ಹರ್ಷಿಣಿ ಕಡೆಯವರು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಯುವತಿ ಅಪಹರಣ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು.ಆಕೆಗಾಗಿ ಶೋಧ ನಡೆಸುತ್ತಿರುವಾಗಲೇ ಇಬ್ಬರ ಮೃತದೇಹಗಳು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿದ್ದು,ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಪತ್ತೆಯಾಗಿದ್ದ ಇಬ್ಬರು ದೇವಾಲಯವೊಂದರಲ್ಲಿ ಮದುವೆಯಾಗಿ ವಾಪಸ್ ಆದ ಬಳಿಕ ಮಹದೇಶ್ವರ ಬಡಾವಣೆ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಪ್ರಕರಣ ದಾಖಲಿಸಿರುವ ರೈಲ್ವೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ