ಕೊಟ್ಟೂರು
ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ಸೋಮವಾರ ರೈತರು ಪಟ್ಟಣದ ಕೃಷಿ ಕೇಂದ್ರಕ್ಕೆ ಮುಗಿಬಿದ್ದು ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ.ರೈತ ಸಂಪರ್ಕ ಕೇಂದ್ರದಲ್ಲಿ ಉತ್ತಮ ತಳಿಯ ಬಿತ್ತನೆ ಬೀಜ ರಿಯಾಯಿತಿ ಬೆಲೆ ದೊರೆಯುತ್ತದೆ. ಆದರೆ ಖಾಸಗಿ ಗೊಬ್ಬರ ಮತ್ತು ಔಷಧಿ ಅಂಗಡಿಯಲ್ಲಿ ಬೆಲೆಯೂ ಹೆಚ್ಚು ಆದ್ದರಿಂದ ಕೃಷಿ ಕೇಂದ್ರದ ಬಿತ್ತನೆ ಬೀಜಕ್ಕೆ ಅಧಿಕ ಬೇಡಿಕೆ.
ಈಗಾಗಲೇ ಹೊಲವನ್ನು ಸಂಪೂರ್ಣ ಸ್ವಚ್ಚಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣಿಸಿಕೊಂಡಿದೆ.ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಗೊಬ್ಬರ, ಶೇಂಗಾ, ರಾಗಿ, ಮೆಕ್ಕೆಜೋಳ, ಸಜ್ಜೆ, ನವಣೆ ಬೀಜವನ್ನು ಪಹಣಿ, ಆಧಾರ ಕಾರ್ಡ ಜೆರಾಕ್ಸ ಕೊಟ್ಟು ರಿಯಾಯಿತಿ ಬೆಲೆಯಲ್ಲಿ ಭೀಜವನ್ನು ರೈತರು ಬೆಳಗ್ಗೆಯಿಂದಲೇ ಖರೀದಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ರಾಗಿ, ನವಣೆ, ಸಜ್ಜೆ ಮುಂತಾದ ಸಾವಯವ ಬೆಳೆಗೆ ಪ್ರೋತ್ಸಾಹ ಬೆಲೆ ನೀಡುವುದರಿಂದ ಹೆಚ್ಚು ರೈತರು ಸಾವಯವ ಭಿತ್ತನೆ ಬೀಜವನ್ನು ಸಹಾ ಖರೀದಿ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
