ಬಿಜೆಪಿ ಪರ ರಾಣಿ ಸಂಯುಕ್ತಾ ಪ್ರಚಾರ.

ಹೊಸಪೇಟೆ :

    ಇಲ್ಲಿಗೆ ಸಮೀಪದ ಟಿ.ಬಿ.ಡ್ಯಾಂನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಸೋಮವಾರ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರ ಪ್ರಚಾರ ನಡೆಸಿದರು.ಕಾಲ್ನಡಿಗೆ ಮುಖಾಂತರ ಟಿ.ಬಿ.ಡ್ಯಾಂ ಬಡಾವಣೆ, ನಿಶಾನಿ ಕ್ಯಾಂಪ್‍ಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪನವರ ಪರ ಮತಬೇಟೆ ನಡೆಸಿದರು.

     ಈ ವೇಳೆ ಮಾತನಾಡಿದ ರಾಣಿ ಸಂಯುಕ್ತಾ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಗಳನ್ನು ಜನ ಮೆಚ್ಚಿದ್ದಾರೆ. ದೇಶದಲ್ಲಿ ಎಲ್ಲೆಡೆ ಮೋದಿ ಹವಾ ಜೋರಾಗಿದೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಸಾಮಾಥ್ರ್ಯ ಹೊಂದಿದ್ದಾರೆ. ಹೀಗಾಗಿ ಮತದಾರರು ಅವರ ಕೈ ಬಲ ಪಡಿಸಬೇಕು ಎಂದು ಮನವಿ ಮಾಡಿದರು.

     ಇದಕ್ಕೂ ಮುನ್ನ ನಗರದ ಚಿತ್ರಕೇರಿಯಲ್ಲಿ ತಮ್ಮ ಅಪಾರ ಮಹಿಳಾ ಬೆಂಬಲಿರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಮಂಡಲ ಅಧ್ಯಕ್ಷ ಅನಂತ ಪಧ್ಮನಾಭ, ಬಸವರಾಜ ನಾಲತವಾಡ, ಜೆ.ವಸಂತ, ಹನುಮಂತಪ್ಪ, ಡಿ.ಶ್ರೀನಿವಾಸ್, ಗೋವಿಂದರಾಜ, ಭಾರತಿ, ಯೋಗಲಕ್ಷ್ಮಿ, ಪ್ರಿಯಾಂಕ ಜೈನ್, ಸುಜಾತ, ರಂಗಮ್ಮ, ಪದ್ಮಾವತಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link