ತಿಪಟೂರು :
ತನ್ನ ದನಗಳಿಗಾಗಿ ಮೇವುತರಲು ಹೋದ ರೈತನು ಹಾವಿಗೆ ಬಲಿಯಾಗಿರುವ ಘಟನೆ ಇಂದು ಜರುಗಿದೆ.ತಾಲ್ಲೂಕಿನ ಮೇಲಾಪುರ ಗ್ರಾಮದ ವೆಂಕಟರಮಣಗೌಡ(60) ಮೃತಪಟ್ಟ ದುರ್ದೈವಿಯಾಗಿದ್ದು ಪತ್ನಿ ಮತ್ತು ಮಗಳನ್ನು ಅಗಲಿದ್ದಾನೆ. ಮನೆಯಲ್ಲಿ ದನಗಳಿಗೆ ಮೇವಿಲ್ಲದಿದ್ದನ್ನು ಕಂಡು ಬವಣೆಯಲ್ಲಿ ಮೇವನ್ನು ಹಿರಿಯುತ್ತಿದ್ದಾಗ ಹಾವುಕಚ್ಚಿದೆ. ಹಾವುಕಚ್ಚಿದ ತಕ್ಷಣವೇ ವೆಂಕಟರಮಣಗೌಡನನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಪ್ರಕರಣ ತಿಪಟೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
