ಹರಿಹರ:
ಇಂದಿನ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಹೆಚ್ಚಾಗಿ ಓದುವ ಹವ್ಯಾಸವನ್ನು ಬೆಳಸಿಕೊಳ್ಳುವುದರಿಂದ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಾಜಿ ಮಂತ್ರಿ ಡಾ. ವೈ.ನಾಗಪ್ಪ ಹೇಳಿದರು.
ನಗರದ ಕಾಳಿದಾಸ ಬಡಾವಣೆಯಲ್ಲಿರುವ ಶ್ರೀ ಕಾಳಿದಾಸ ಪ್ರೌಢಶಾಲೆಯ ಆವರಣದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳ ದಾಸರಾಗಿದ್ದು ಸಾಮಾನ್ಯ ಜ್ಞಾನದ ಕೊರತೆಯಿಂದ ಜ್ಞಾನದ ಮಟ್ಟ ಕುಸಿಯುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಜ್ಞಾನ ಆಭಿವೃದ್ಧಿಗೊಳಿಸುವಲ್ಲಿ ನಿಟ್ಟಿನಲ್ಲಿ ಉಪಧ್ಯಾಯರುಗಳು ಹೆಚ್ಚು ಹೆಚ್ಚು ದಿನ ಪತ್ರಿಕೆಗಳನ್ನು ಓದುವಂತೆ ಮಾರ್ಗದರ್ಶನ ನೀಡಬೇಕು ಮತ್ತು ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಕುಟುಂಬ, ಸಮಾಜಕ್ಕೆ ಹೆಸರು ತರಬೇಕು. ಪಠ್ಯದ ಜೊತೆಗೆ ಕ್ರೀಡೆ, ಸಾಮಾನ್ಯ ಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
8ನೇ ತರಗತಿಯ 62 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ದ್ಯಾಮಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕೆ.ಬಿ.ಬಸವರಾಜಪ್ಪ, ಕಾರ್ಮಿಕ ಮುಕಂಡ ಎಚ್.ಕೆ.ಕೊಟ್ರಪ್ಪ, ಎನ್.ನಾಗೇಂದ್ರಪ್ಪ ಗಂಗನರಸಿ, ಎಸ್.ಎನ್.ಆಂಜನಪ್ಪ, ಟಿ.ರಾಮಚಂದ್ರಪ್ಪ, ಹುಲಗಪ್ಪ, ಪಾಲಾಕ್ಷಪ್ಪ, ಎನ್.ಬಿ.ಹನುಮಂತಪ್ಪ, ಮುಖ್ಯ ಶಿಕ್ಷಕ ನಿಜಲಿಂಗಪ್ಪ ಕೆ.ಎಚ್., ಶೀಲಾ ಕೆ.ಎನ್., ವಸಂತ್ ಸಿ.ಪೂಜಾರ್, ಶೇಖರಪ್ಪ ಎಚ್.ಟಿ., ಕೃಷ್ಣಮೂರ್ತಿ ಎನ್., ಗಿರಿಜಮ್ಮ ಸಿ.ಎನ್., ಪ್ರಭಾಕರ್ ಎಸ್., ಗುರುರಾಜ್ ಸಿ.ಜಿ., ಜಗದೀಶ್ ಎಲ್.ಎಚ್. ಇತರರಿದ್ದರು.
ಶಾಲೆಯ ವಿದ್ಯಾರ್ಥಿಗಳಾದ ಚಿನ್ನು ಮತ್ತು ರೊಜಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಶಾಲೆಯ ಮುಖ್ಯ ಉಪಾಧ್ಯಾಯ ಕೆ. ಹೆಚ್. ನಿಜಲಿಂಗಪ್ಪ ಸ್ವಾಗತ, ವಸಂತ ಪೂಜಾರ್ ವಂದನಾರ್ಪಣೆ ಮತ್ತು ನಿರೂಪಣೆಯನ್ನು ಶಿಕ್ಷಕಿ ಶ್ರೀ ಮತಿ ಶೀಲಾ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
