ನೀರಿನಲ್ಲಿ ಸಾವು ಸಂಭವಿಸದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ : ಪೂವಿತಾ

ತಿಪಟೂರು :

      ತಾಲೂಕಿನಲ್ಲಿ ಕೆರೆಕಟ್ಟೆಗಳು ಹೇಮಾವತಿ ನಾಲಾ ನೀರಿನಿಂದ ತುಂಬುತ್ತಿದ್ದು ಮುಂಜಾಗೃತ ಕ್ರಮವಾಗಿ ನೀರು ಎಷ್ಟು ಆಳವಿದೆ ಎಂಬುದರ ಬಗ್ಗೆ ಗ್ರಾಮಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಚನಫಲಕ ಆಳವಡಿಸುವುದರ ಮೂಲಕ ನೀರಿನಿಂದಾಗುವ ಅನಾಹುತ ಸಂಭವಿಸದಂತೆ ಕ್ರಮಕೈಗೊಳ್ಳಿ ಎಂದು ಉಪವಿಭಾಗಧಿಕಾರಿ ಪೂವಿತಾ ತಿಳಿಸಿದರು.

      ನಗರದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ತಿಪಟೂರು ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕೆರೆ ಕಟ್ಟೆಗಳಲ್ಲಿ ಈಜಲು ಹೋಗಿ ಐದು ಮಂದಿ ಸಾವನಪ್ಪಿದ್ದು ಇವರಲ್ಲಿ 3 ಜನರು ಕಾಲೇಜು ವಿದ್ಯಾರ್ಥಿಗಳಾಗಿದ್ದು 17 ಮತ್ತು 18ರ ಆಸುಪಾಸಿನವರಾಗಿದಾರೆ.

       ಶಾಲೆ ಕಾಲೇಜುಗಳಿಗೆ ರಜೆ ಇದ್ದ ಸಂಧರ್ಬದಲ್ಲಿ ಬೇರೆ ಊರುಗಳಿಂದ ಬರುವ ಸ್ನೇಹಿತರ ಜೊತೆ ಸ್ಥಳದಬಗ್ಗೆ ಅರಿವಿಲ್ಲದೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆರೆ-ಕಟ್ಟೆ ಬಳಿ ಈಜಲು ಬರುತ್ತಿರುವುದರಿಂದ ನೀರಿನಮಟ್ಟ ಎಷ್ಟಿದೆ ಎಂಬ ಜ್ಞಾನವಿಲ್ಲದೆ ನೀರಿಗೆ ಇಳಿದು ಅಪಾಯವನ್ನು ಮೈಮೇಲೆಳೆದುಕೊಂಡು ಸಾವನ್ನು ತಂದುಕೊಳ್ಳುತ್ತಿದ್ದು ಇನ್ನು ಕೆಲವರು ಸಾಹಸವನ್ನು ಪ್ರದರ್ಶಿಸಲು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಸಣ್ಣ ನೀರಾವರಿ ಇಲಾಖೆ ಪೋಲೀಸ್ ಇಲಾಖೆ ಗ್ರಾಮಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವುಮೂಡಿಸಲು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link