ಮದ್ಯದಂಗಡಿಗಳ ಸ್ಥಳಾಂತರಕ್ಕೆ ಒತ್ತಾಯ

ತುರುವೇಕೆರೆ:

      ಪಟ್ಟಣ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಸ್ಥಳಗಳಲ್ಲಿ ತೆರೆದಿರುವ ಮದ್ಯದಂಗಡಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ತಾಲ್ಲೂಕು ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಸೀಲ್ದಾರ್ ಆರ್.ನಯಿಂಉನ್ನಿಸಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

      ಪಟ್ಟಣದ ವೈಟಿ ರಸ್ತೆಗೆ ಹೊಂದಿಕೊಂಡಂತಿರುವ ವೆಂಕಟೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ ಅಂಗಡಿಯವರು ನಿಮಯದಂತೆ ಬಾಗಿಲು ತೆರೆಯಬೇಕು. ಆದರೆ ಇವರು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆಯುತ್ತಾರೆ. ಮದ್ಯವ್ಯಸನಿಗಳು ಕುಡಿದ ಮತ್ತಿನಲ್ಲಿ ತಿಪಟೂರು ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿರುವ ಡಿಪ್ಲೋಮಾ, ಗುಡ್ಡೇನಹಳ್ಳಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸುಕಾಸುಮ್ಮನೆ ಕಿರಿಕಿರಿ ಮಾಡುತ್ತಾರೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.

      ಅದೇ ರೀತಿ ಹಿಂದೆ ಮೂನಿಯೂರು ಗ್ರಾಮದ ಪಕ್ಕದಲ್ಲಿಯೇ ವೈನ್‍ಶಾಪ್ ತೆರೆಯಲಾಗಿತ್ತು. ಸ್ಥಳೀಯ ಜನರು ಕುಡುಕರ ಕಾಟದಿಂದ ರೋಸಿ ಹೋಗಿ ಪ್ರತಿಭಟನೆ ಮಾಡಿ ವೈನ್‍ಶಾಪ್ ಸ್ಥಳಾಂತರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಆದರೆ ಈಗ ಮುನಿಯೂರು ಗದ್ದೆ ಬಯಲಿನಲ್ಲಿ ದಿಢೀರನೆ ಬಾಲಾಜಿ ವೈನ್‍ಶಾಪ್ ತೆರೆಯಲಾಗಿದೆ ಎಂದು ದೂರಿದರು.

      ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯ: ವೆಂಕಟೇಶ್ವರ ಬಾರ್ ಅನ್ನು ನಿಗದಿತ ಸಮಯಕ್ಕಿಂತ ಮೊದಲೆ ತೆರೆಯುವುದು ಮತ್ತು ಹೆಚ್ಚು ಸಾರ್ವಜನಿಕರು ಸೇರುವ ಸನಿಹದಲ್ಲಿ ಈ ವೈನ್ ಶಾಪ್ ಇರುವುದರಿಂದ ಜನರಿಗೆ ನಿತ್ಯಾ ಅನೇಕ ತೊಂದರೆಗಳಾಗುತ್ತಿದ್ದು ಈ ಬಗ್ಗೆ ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ಹಲವು ಬಾರಿ ಪಟ್ಟಣದ ಅಬಕಾರಿ ನಿರೀಕ್ಷಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದ ಅವರು, ತಹಸೀಲ್ದಾರ್‍ರವರು ಈ ಬಾರ್‍ಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ತಾಲ್ಲೂಕು ನಾಗರೀಕ ವೇದಿಕೆಯ ಪದಾಧಿಕಾರಿಗಳು ಒತ್ತಾಯಿಸಿದರು. ನಂತರ ಶಾಸಕ ಮಸಾಲಜಯರಾಮ್ ಅವರಿಗೂ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಎಪಿಎಮ್‍ಸಿ ವಿ.ಟಿ.ವೆಂಕಟರಾಮ್, ಪ.ಪಂ.ಸದಸ್ಯ ಚಿದಾನಂದ, ನಾಗರೀಕ ವೇದಿಕೆಯ ವಿ.ಬಿ.ಸುರೇಶ್, ಮೈನ್ಸ್ ರಾಜಣ್ಣ, ಲಿಂಗರಾಜು, ತಿಮ್ಮೇಗೌಡ, ಮಂಗೀಕುಪ್ಪೆ ಸೋಮಣ್ಣ, ಕಾಳಂಜಿಹಳ್ಳಿ ಸೋಮಶೇಖರ್, ಸಾಗರ್, ಶಿವನಂಜಯ್ಯ, ಗೋಪಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link