ಕೊರಟಗೆರೆ:-
ಸಿದ್ದೇಶ್ವರ ದಾಸೋಹ ಸಮಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅಲವು ದೂರುಗಳು ಬಂದಿದ್ದು, ಸಮಿತಿಯಲ್ಲಿ ಕಾರ್ಯದರ್ಶಿ ಯಿಂದ ಲೋಪ ನಡೆದಿದ್ದರೆ ಸಮಗ್ರತನಿಖೆ ನಡಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮದುಗಿರಿ ಉಪ ವಿಭಾಗಾಧಿಕಾರಿ ವೀಣಾ ಸಾರ್ವಜನಿಕರಿಗೆ ಭರವಸೆ ನೀಡಿದರು.
ತಾಲೂಕಿನ ಪುಣ್ಯಕ್ಷೇತ್ರ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕುಡಿಯುವ ನೀರು ಮತ್ತು ದಾಸೋಹ ಸೇವಾ ಸಮಿತಿಯ ಸಮಸ್ಯೆಯ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಇತೀಚಿನ ಬೇಳವಣಿಗೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು
ಸಿದ್ದೇಶ್ವರ ದಾಸೋಹ ಸಮಿತಿಯಲ್ಲಿಭ್ರಷ್ಟಚಾರ ನಡೆದಿದ್ದರೆ ಕ್ರಮತೆಗೆದುಕೊಳಲಾಗುವುದ್ದು ಎಂದರು.ಸಿದ್ದರಬೇಟ್ಟದ ಸಿದ್ದೇಶ್ವರ ಸ್ವಾಮಿಯ ಹೆಸರಲ್ಲಿಯಾವುದೇರೀತಿಯ ಸೇವಾ ಸಮಿತಿರಚಿಸಲುಅವಕಾಶವಿಲ್ಲ.. ಸ್ಥಳೀಯರು ಮತ್ತು ಅಧಿಕಾರಿಗಳಿಗೆ ಅನಧಿಕೃತದಾಸೋಹ ಸಮಿತಿಯ ಮಾಹಿತಿಇಲ್ಲವೇ..ಯಾರಾದರೂಒಬ್ಬರು ಅಧಿಕಾರಿಗಳಿಗೆ ದೂರು ನೀಡಿಲ್ಲ ಏಕೆ..ಸಿದ್ದರಬೇಟ್ಟದ ಕಂದಾಯ ಅಧಿಕಾರಿಗಳು ಏನು ಮಾಡುತ್ತೀದ್ದೀರಾಎಂದು ಅಧಿಕಾರಿಗಳ ವಿರುದ್ದಆಕ್ರೋಶ ವ್ಯಕ್ತಪಡಿಸಿದರು.
ಸಿದ್ದೇಶ್ವರ ದಾಸೋಹ ಸೇವಾ ಸಮಿತಿ ಮುಜರಾಯಿ ವಶದಲ್ಲಿಇಲ್ಲ. ಸಮಿತಿ ನಿರ್ವಹಣೆ ಮಾಡುತ್ತೀದ್ದ ಕಾರ್ಯದರ್ಶಿ ರಾಜಣ್ಣನಿಗೆ ಸಭೆಗೆ ಬರಲು ಸೂಚಿಸಿದ್ದೇನೆ. ಸಮಿತಿ ಕಾರ್ಯದರ್ಶಿ ಸಭೆಗೈರಾಗಿರುವ ಹಿನ್ನಲೆದಾಸೋಹ ಸಮಿತಿ ನಿರ್ವಹಣೆಯ ಸಂಪೂರ್ಣ ಆಡಳಿತದ ಜವಾಬ್ದಾರಿಯನ್ನುತಾತ್ಕಲಿಕವಾಗಿ ಉಪತಹಶೀಲ್ದಾರ್ ಶ್ರೀಧರ್ ಮತ್ತು ಪಾರುಪತ್ತೇದಾರ್ ವಿರಮಲ್ಲಯ್ಯನಿಗೆ ವಹಿಸಲಾಗಿದೆಎಂದು ತಿಳಿಸಿದರು.
ಸಿದ್ದೇಶ್ವರ ಸೇವಾ ಸಮಿತಿ ನಿರ್ವಹಣೆಯ ವೇಳೆ ಕಾರ್ಯದರ್ಶಿ ರಾಜಣ್ಣಕರ್ತವ್ಯ ಲೋಪ ಮತ್ತುಎಂದು ಸ್ತಳೀಯ ಭಕ್ತಾದಿಗಳು ದೂರು ನೀಡಿದ್ದಾರೆ. ಮೆ.2ರ ಸಭೆಗೆ ಬರುವಂತೆ ಸೂಚನೆ ನೀಡಿದರೂ ಸಹ ಗೈರಾಗಿದ್ದಾರೆ.ದೇವಾಲಯದ ಹೆಸರಿನಲ್ಲಿ ಹಣ ವಸೂಲಿ ಮಾಡಿ ಮೋಸ ಮಾಡುತ್ತೀದ್ದಾನೆಎಂದು ನೂರಾರುಜನ ಭಕ್ತಾಧಿಗಳು ದೂರು ನೀಡಿದ್ದಾರೆ.ಸಮಿತಿಯದಾಖಲೆ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನಕ್ರಮಕ್ಕೆ ಸೂಚಿಸುತ್ತೇನೆ ಎಂದರು.
ಸಿದ್ದರಬೇಟ್ಟದ ಸ್ಥಳೀಯ ಮುಖಂಡ ನಂಜುಂಡಸ್ವಾಮಿ ಮಾತನಾಡಿ ಪವಿತ್ರಕ್ಷೇತ್ರವಾದ ಸಂಜೀವಿನಿ ತಾಣದಲ್ಲಿ ಅಕ್ರಮಗಳೇ ಹೆಚ್ಚಾಗಿದೆ.ದೇವಾಲಯ ಆಡಳಿತ ಮಂಡಳಿಯ ಲೆಕ್ಕಾಚಾರದ ಮಾಹಿತಿಯೇ ನಿಗೂಢವಾಗಿದೆ.ಕೋಟ್ಯಾಂತರರೂಅನುಧಾನ ಬಂದರೂ ಸಹ ಅಭಿವೃದ್ದಿ ಮಾತ್ರ ಮರೀಚಿಕೆ ಆಗಿದೆ.ಪ್ರವಾಸಿ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುವ ಅಧಿಕಾರಿಗಳು ಸಹ ಕಾಣೆಆಗಿರುವುದು ವಿಪರ್ಯಾಸ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರಾಜಣ್ಣನ ಏಕಪಕ್ಷಿಯ ನಿರ್ಧಾರದಿಂದ ಸಿದ್ದರಬೇಟ್ಟ ಪ್ರವಾಸಿ ಕ್ಷೇತ್ರಕ್ಕೆ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ಮುಜರಾಯಿ ಇಲಾಖೆ ಮತ್ತು ದೇವಾಲಯ ನಡುವೆ ವೈಮನಸ್ಸು ತಂದಿಟ್ಟು ತನಗೆ ಬೇಕಾದ ರೀತಿಯಲ್ಲಿ ಆಡಳಿತ ಲೇಕ್ಕಾಪತ್ರವನ್ನು ತಿರುಚುವ ಕೆಲಸ ಮಾಡುತ್ತಾನೆ. ತಕ್ಷಣ ದಾಸೋಹ ಸೇವಾ ಸಮಿತಿಯನ್ನು ಸೂಪರ್ ಸಿಡ್ ಮಾಡಬೇಕು ಎಂದು ತೋವಿನಕೆರೆ , ಕುರಂಕೋಟೆ ಮತ್ತು ಬೂದಗವಿ ಗ್ರಾಪಂ ನೂರಾರುಜನ ಭಕ್ತಾಧಿಗಳು ಆಗ್ರಹ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಶಿವರಾಜು, ಉಪತಹಶೀಲ್ದಾರ್ ಶ್ರೀಧರ್, ಕಂದಾಯ ನೀರಿಕ್ಷಕ ನಟರಾಜು, ಪಾರುಪತ್ತೇದಾರ್ ವೀರಮಲ್ಲಯ್ಯ, ಪಪಂ ಮುಖ್ಯಾಧಿಕಾರಿಗ್ರಾಪಂ ಪಿಡಿಓ ವಿಜಯಲಕ್ಷ್ಮೀ, ತಾಪಂ ಸದಸ್ಯಗಿರೀಜಾಅರವಿಂದ್, ಮಾಜಿತಾಪಂಉಪಾಧ್ಯಕ್ಷ ವಿಜಯಶಂಕರ್, ಗ್ರಾಪಂಉಪಾಧ್ಯಕ್ಷೆ ಆದಿಲಕ್ಷ್ಮಮ್ಮ, ಸದಸ್ಯಗಿರೀಶ್, ಮುಖಂಡರಾದಅಖಂಡರಾಧ್ಯ, ಸಿದ್ದರಾಜು, ಪಾಂಡುರಂಗಯ್ಯ, ನಾಗರಾಜು ಸೇರಿದಂತೆ ನೂರಾರು ಜನ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
